ಸಂಜೀವಿನಿ ಮಾಸಿಕ ಸಂತೆ ಉದ್ಯೋಗ ವಿಕಾಸ ಪಾಕ್ಷಿಕ ಕಾರ್ಯಕ್ರಮ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸ ಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘದ ಸದಸ್ಯರು ಉತ್ಪಾದಿಸಿದ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಸಂಜೀವಿನಿ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೌಶಲ್ಯ ಅಭಿವೃದ್ಧಿ ಉತ್ತಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಪಂಚಾಯಿತಿ ವಿಜಯನಗರ ತಾಲೂಕ್ ಪಂಚಾಯತಿ ಕೂಡ್ಲಿಗಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಮತ್ತು ಮದರ್ ತೆರೇಸಾ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಹೊಸಹಳ್ಳಿ ಇವರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತಾಲೂಕ್ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೈ ರವಿಕುಮಾರ್ ಮಾತನಾಡಿ ಸಂಜೀವಿನಿ ಮಾಸಿಕ ಸಂತೆ ಉದ್ದೇಶ ಗ್ರಾಮೀಣ ಭಾಗದ ಎಲ್ಲ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಮಹಿಳಾ ಸದಸ್ಯರು ಉತ್ಪಾದಿಸಿದ ವಸ್ತುಗಳ ಮಾರಾಟ ಮತ್ತು ಪ್ರದರ್ಶನ ಸಂಘಗಳಲ್ಲಿ ಮಹಿಳಾ ಸದಸ್ಯರು ಸ್ವಂತ ಸಂಘಗಳಲ್ಲಿ ಎಲ್ಲಾ ಮಹಿಳಾ ಸದಸ್ಯರು ತಮ್ಮ ಕುಟುಂಬ ನಿರ್ವಹಣೆಗಾಗಿ ಜೀವನೋಪಾಯ ಕಂಡುಕೊಂಡು ಸಾಮಾಜಿಕ ಆರ್ಥಿಕ ಬಲವರ್ಧನೆಗೆ ಜೀವನೋಪಾಯ ಚಟುವಟಿಕೆ ಮಾಡುವುದರಿಂದ ತಮ್ಮ ತಮ್ಮ ಕೌಶಲ್ಯ ತರಬೇತಿ ಯೊಂದಿಗೆ ಕೌಶಲ್ಯ ವಸ್ತುಗಳನ್ನು ಬಳಸಿಕೊಂಡು ಉತ್ತಮವಾದ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ.
ಇದರಿಂದ ತಮ್ಮ ತಮ್ಮ ಕುಟುಂಬಗಳ ಉತ್ತಮ ಜೀವನ ಮಾಡಬಹುದು ಎಂದು ತಿಳಿಸಿದರು.
ಸ್ವಸಾಯ ಸಂಘಗಳ ಮಹಿಳಾ ಸದಸ್ಯರು ಆರ್ಥಿಕ ಅಭಿವೃದ್ಧಿ ಹೊಂದಲು ಹಾಗೂ ಸಂಘದ ಸದಸ್ಯರು ಒಟ್ಟಾಗಿ ಸಂಘಗಳನ್ನು ರಚಿಸಿಕೊಂಡು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುವ ಸಾಲ ಸೌಲಭ್ಯವನ್ನು ಪಡೆದು ಕೌಶಲ್ಯಾಭಿವೃದ್ಧಿ ವಸ್ತುಗಳನ್ನು ಉತ್ಪಾದಿಸುವ ಉತ್ಪಾದಿಸುವುದರಿಂದ ಜೀವನ ನಡೆಸಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೀಲಮ್ಮ ಬೊಮ್ಮಣ್ಣ
ಉಪಾಧ್ಯಕ್ಷರಾದ ಬೋರಣ್ಣ.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಲಿಂಗಪ್ಪ. ತಾಲೂಕು ಕಾರ್ಯಕ್ರಮ ಧಿಕಾರಿಗಳ ದ ಗಿರೀಶ್. ಲಿಂಗೇಶ್.ಗ್ರಾಮ ಪಂಚಾಯತಿ ಕಾನಾಹೋಸಹಳ್ಳಿ ಮದರ್ ತೆರೇಸಾ ಸಂಜೀವಿನಿ ಒಕ್ಕೂಟ ದ ಅಧ್ಯಕ್ಷರಾದ ಶ್ರೀಮತಿ G ಗಾಯತ್ರಿ ಮತ್ತು ಖಜಾಂಚಿಯವರಾದ ಶ್ರೀಮತಿ ನಾಗರತ್ನ ಮತ್ತು ಒಕ್ಕೂಟ ದ ಎಲ್ಲ ಸದಸ್ಯರ ಮತ್ತು MBK LCRP ಸಿಬ್ಬಂದಿಗಳ ನೇತೃತ್ವದಲ್ಲಿ ಮಾಸಿಕ ಸಂತೆ ಆಯೋಜಿಸಲಾಗಿದೆ. ಸೇರಿ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು…
ವರದಿ. ವಿರೇಶ್. ಕೆ. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030