ಮೋಟರ್ ಸೈಕಲ್ ಗೆ ಲಾರಿ ಡಿಕ್ಕಿ ಮೋಟರ್ ಸೈಕಲ್ ಸವಾರ ಸ್ಥಳದಲ್ಲೇ ಸಾವು..
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಕಾನಹೊಸಹಳ್ಳಿ.
ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಇಮಡಪುರ ಗ್ರಾಮದ ಆಕಾಶ(18 ವರ್ಷ) ತಂದೆ ಆರ್. ಓ ತಿಮ್ಮಣ್ಣ ಈತನು ಮೋಟರ್ ಸೈಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೊಸಹಳ್ಳಿ ಕಡೆಯಿಂದ ಇಮಡಾಪುರ ಗ್ರಾಮಕ್ಕೆ ಬರುವ ದಾರಿಯ ಮಧ್ಯದಲ್ಲಿ ಅತಿ ವೇಗವಾಗಿ ಬಂದ ಲಾರಿ ಬೈಕ್ ಸವಾರ ಆಕಾಶನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಬೈಕ್ ಸವಾರ ಆಕಾಶ ಮೃತಪಟ್ಟಿರುತ್ತಾನೆ.ಈ ಘಟನೆ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ಹೊಸಹಳ್ಳಿ ಗ್ರಾಮದ ಎಸಿ ಚನ್ನಬಸಪ್ಪನಹೊಲದ ಹತ್ತಿರ ಜರುಗಿದೆ. ಈ ಸಂಬಂಧ ಮೃತ ಆಕಾಶನ ತಂದೆ ಆರ್. ಓ. ತಿಮ್ಮಣ್ಣ ಕೊಟ್ಟ ದೂರಿನಂತೆ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ…
ವರದಿ. ಡಿ.ಎಂ.ಈಶ್ವಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030