ಹೊಸಹಳ್ಳಿ,: ಹುಲಿಕೆರೆ ಕೆರೆ ಮೇಲಿನ ಅಪಘಾತದ ರಸ್ತೆ.
ಹೊಸಹಳ್ಳಿ ಜಗಳೂರು ಜಿಲ್ಲಾ ಮುಖ್ಯ ರಸ್ತೆಯಲ್ಲಿಬರುವ ಹುಲಿಕೆರೆ ಕೆರೆಯ ಮೇಲಿನ ರಸ್ತೆ ತೀರ ಚಿಕ್ಕದಾಗಿದ್ದು ಅಂಕುಡೊಂಕಿನ ತಗ್ಗು ಗುಂಡಿಗಳಿಂದ ಕೂಡಿದ್ದು ,ಅನೇಕವರ್ಷಗಳಿಂದ ಬೈಕ್ ಸವಾರರು ಆಟೋ ಸವಾರರು ಈ ರಸ್ತೆಯ ಮೇಲೆ ಸಾಕಷ್ಟು ಬಾರಿ ಅಪಘಾತವಾಗಿದ್ದು ಒಂದು ಬಸ್ಸು ಹೋದರೆ ಮತ್ತೊಂದು ವಾಹನಕ್ಕೆ ಜಾಗವೇ ಇಲ್ಲದಂತಹ ತೀರಾ ಚಿಕ್ಕದಾಗಿ ಇರುವಂತಹ ದುರ್ಗಮ ಹಾದಿ ಇದಾಗಿದೆ, ಇದುವರೆಗೂ ಸಂಬಂಧಪಟ್ಟ ಇಲಾಖೆಯವರು ತೀರಾ ಚಿಕ್ಕದಾಗಿದ್ದ ರಸ್ತೆಯನ್ನು ಅಗಲೀಕರಣ ಗೊಳಿಸದೆ ಕಾಟಾಚಾರಕ್ಕೆ ದುರಸ್ತಿ ಕಾರ್ಯವನ್ನು ಮಾಡು ತ್ತಾರೆ. ಈ ರಸ್ತೆಯ ಇಕ್ಕೆಲಗಳಲ್ಲಿ ತಡೆ ಕಲ್ಲುಗಳು ಅಲ್ಲೊಂದು ಇಲ್ಲೊಂದು ಇದ್ದು ರಭಸವಾಗಿ ಬರುವಂತಹ ವಾಹನಗಳು ಯಾವುದೇ ರಕ್ಷಣೆ ಇಲ್ಲದೆ ಸುಮಾರು 80 ರಿಂದ 90 ಅಡಿ ಕೆರೆಯಪ್ರಪಾತಕ್ಕೆ ಬೀಳುವಂತಹ ಸಂಭವವಿರುತ್ತದೆ ,ಮಳೆಗಾಲದಲ್ಲಂತೂ ಈ ರಸ್ತೆಯ ಓಡಾಡುವ ಬೈಕ್ ಸವಾರರು ರೈತರು ತಮ್ಮ ಜಮೀನುಗಳಿಗೆ ಹೋಗುವಾಗ ಈ ರಸ್ತೆಯನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ, . ಕಡಿವಾಣವಿಲ್ಲದ ಆಟೋಗಳು ಎಗ್ಗಿಲ್ಲದೆ ರಸ್ತೆ ಮೇಲೆ ಸಂಚರಿಸುವುದರಿಂದ ಪ್ರಯಾಣಿಕರು ಸಹ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದಾರೆ, ಅದರಿಂದ ಇಲಾಖೆಯವರು ಈ ರಸ್ತೆಯನ್ನು ಅಗಲೀಕರಣಗೊಳಿಸಿ ಉತ್ತಮ ರಸ್ತೆಯನ್ನು ನಿರ್ಮಿಸಿ ಅಪಘಾತದಿಂದ ಜನರನ್ನ ಮುಕ್ತಗೊಳಿಸಲು ಜನರು ವಿನಂತಿಸಿದ್ದಾರೆ..
ವರದಿ. ವಿರೇಶ್, ಕೆ, ಎಸ್, ಹೂಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030