ಹೂಡೇಂ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 4ನೇ ವಾರ್ಷಿಕ ಮಹಾಜನ ಸಭೆ
ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದಲ್ಲಿ ಇಂದು ಸಮುದಾಯ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತ 4ನೇ ವಾರ್ಷಿಕ ಮಹಾಜನ ಸಭೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಜರುಗು ಬೋರಯ್ಯ ನವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಹುಡೇಂ ಗ್ರಾಮದಲ್ಲಿ ಆಡಳಿತ ಮಂಡಳಿಯ ಸಭೆ ನಡೆಸಿದ್ದು ಪಾವತಿಸಿದ ಸದಸ್ಯರಿಗೆ ಸದ್ಯಸ್ತವ ನೀಡಿ ಅನುಮೋದಿಸುವ ಒಟ್ಟು 9 ಆಡಳಿತ ಮಂಡಳಿಯ ಸಭೆಗಳು ನಡೆಸಿದ್ದು ಈ ಸಭೆಗಳಲ್ಲಿ ಷೆರು ಪಾವತಿಸಿದ ಸದಸ್ಯತ್ವ ನೀಡಿ ಅನುಮೋದಿಸುವ ಬಗ್ಗೆ ಪಾಹಣಿ ನೀಡಿದ ರೈತರಿಗೆ ಎನ್.ಸಿ.ಎಲ್ ಅನುಮೋದನೆಗೆ ಕಳುಹಿಸುವಬಗ್ಗೆ, ಕೆ.ಸಿ.ಸಿ ಸಾಲದ ಮಂಜೂರಾತಿಯ ಬಗ್ಗೆ, ಪಿಗ್ನಿ ಸಂಗ್ರಹದ ಬಗ್ಗೆ ಜಿ.ಡಿ.ಪಿ ಸಾಲದ ವಿತರಣೆ ಮತ್ತು ವಸೂಲತಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಮಹಾಂತೇಶ್, ಬೋಸ ಮಲ್ಲಯ್ಯ ನಿರ್ದೇಶಕರು, ಚಂದ್ರಶೇಖರ್, ರವಿ ನಿರ್ದೇಶಕರು ತಾಯಕನಹಳ್ಳಿ, ಅಯ್ಯಣ್ಣ, ಶರಣಪ್ಪ, ತಿಪ್ಪೇಸ್ವಾಮಿ, ಪೆದ್ದುಓಬಯ್ಯ, ಶ್ರೀಮತಿ ಕಮಲಮ್ಮ ಮೂರ್ತಿಪ್ಪ, ಶ್ರೀಮತಿ ಗಂಗಮ್ಮ, ಶ್ರೀಮತಿ ಕೋಲಾರಮ್ಮ, ವಿಶ್ವನಾಥ್ ಮುಖ್ಯಕಾರ್ಯನಿರ್ವಾಹಕ ಹಾಗೂ ರಾಜಣ್ಣ ಸೇರಿದಂತೆ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು…
ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030