ಒಂದೇ ತಾಲ್ಲೂಕಿನಿಂದ ಎಂಟು ಜನ ಪಿಎಸ್ಐ ಹುದ್ದೆಗೆ ಆಯ್ಕೆ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನಿಂದ 2021-2022 ಸಾಲಿನ ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಎಂಟು ಜನರು ಆಯ್ಕೆಯಾಗಿ ದಾಖಲೆ ಸೃಷ್ಟಿಸುವಲ್ಲಿ ಪಾತ್ರರಾಗಿದ್ದಾರೆ.
ಪಿಎಸ್ಐ ಹುದ್ದೆಗೆ ಎಂಟು ಜನ ತಾಲ್ಲೂಕ್ಕಿನಿಂದ ಆಯ್ಕೆಯಾಗಿರುವುದು ತಾಲ್ಲೂಕ್ಕಿಗೆ ಶ್ಲಾಘನೀಯ ಮತ್ತು ಹೆಮ್ಮೆಯ ಸಂಗತಿ.
ಬಾಗಲಕೋಟೆ ಜಿಲ್ಲೆ
ರಬಕವಿ ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯಿಂದ ಕುಮಾರ ಪುನೀತ್ ಮುರಿಗೆಪ್ಪ ಶಿರಹಟ್ಟಿ,
ಕುಮಾರ ಅಕ್ಷಯ ನಾರಾಯಣ ದೇವಾಡಿಗ, ಕುಮಾರಿ ದೀಪಾ ಸೋಮಶೇಖರ ಹಿರೇಮಠ ಹಾಗು ಸಾದಿಯಾ ಅಬೂಬಕರ ಗುರ್ಲಹೊಸುರ ಆಯ್ಕೆಗೊಂಡಿದ್ದರೆ ಕುಲಹಳ್ಳಿ ಗ್ರಾಮದಿಂದ ನಿವೃತ್ತ ಯೋಧ ಶ್ರೀಧರ ಮಹಾದೇವ ಕಂಕಣವಾಡಿ, ಮಂಜುನಾಥ ಶಿವಲಿಂಗಪ್ಪ ತೇಲಿ, ಮಂಜುನಾಥ ಹಣಮಂತಪ್ಪ ತೇಲಿ ಹರ್ಷದ್ ಸೂರಜ್ ಸಂತಿ ಆಯ್ಕೆಯಾಗಿದ್ದು ಜಿಲ್ಲೆಯ ಜನರ ಶ್ಲಾಘನೀಯಕ್ಕೆ ಪಾತ್ರರಾಗಿದ್ದಾರೆ.
ವರದಿ.ಬಸವರಾಜ ನಂದೆಪ್ಪನವರ ರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030