ಇಟ್ಟಿಗಿ ಪೋಲಿಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ರಸ್ತೆಯಲ್ಲಿನ ಗುಂಡಿ ಮುಚ್ಚಲಾಯಿತು.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ ಪೋಲಿಸ್ ಠಾಣೆಯ ಅಧಿಕಾರಿಗಳಾದ ಶ್ರೀ ವೀರೇಶ್ ಮಾಳ ಶೆಟ್ಟಿ ಸರ್ PSI,ಹಾಗೂ ಸಿಬ್ಬಂದಿಗಳ ಸಹಯೋಗದೊಂದಿಗೆ ಇಟ್ಟಿಗಿಯ ಪ್ರಮುಖ ರಸ್ತೆಯಲ್ಲಿದ್ದಂತಹ ಗುಂಡಿಗಳನ್ನು ಮುಚ್ಚಿಹಾಕುವ ಮೂಲಕ ನಿತ್ಯ ಪ್ರಯಾಣಿಕರ ಹಾಗೂ ಊರಿನ ಜನರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾವಾಯಿತು ತಮ್ಮ ಕರ್ತವ್ಯವಾಯಿತು ಅನ್ನುವ ಎಷ್ಟೋ ಸರ್ಕಾರಿ ಅಧಿಕಾರಗಳು ಇರುವಂತಹ ಸಮಾಜದಲ್ಲಿ ಪೋಲಿಸ ಇಲಾಖೆ ಎಂದರೆ “ಭಯವಲ್ಲ ಭರವಸೆ” ಎನ್ನುವ ಸಂದೇಶ ಸಾರುತ್ತ. ತಮ್ಮ ಕರ್ತವ್ಯದೊಂದಿಗೆ ಇಂತಹ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರವರು ನಮ್ಮ ಇಟ್ಟಿಗಿಯ ಠಾಣೆಯ PSI ಆದಂತಹ ಶ್ರೀ ವೀರೇಶ್ ಮಾಳ ಶೆಟ್ಟಿ ಸರ್ ಹಾಗೂ ಸಿಬ್ಬಂದಿಗಳು ಈ ಕಾರ್ಯದಲ್ಲಿ ಇಟ್ಟಿಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ರ ಹಾಗೂ ನೆಲ್ಕುದ್ರಿ ಮತ್ತು ಕನ್ನಿಹಳ್ಳಿ ಗ್ರಾಮದ ಕೆಲ ದೈವಸ್ಥರ ಸಹಯೋಗವು ಸೇರಿದೆ.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030