ಹುಬ್ಬಳ್ಳಿಯಲ್ಲಿ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಕಬಡ್ಡಿ ಪಂದ್ಯಾವಳಿ ಮಾರಂಭ ಜರುಗಿತು
ಹುಬ್ಬಳ್ಳಿ: ಜೆಸಿ ನಗರದ ಎಸ್ ಜೆ ಎಮ್ ವಿ ಎಸ್ ಮಹಿಳಾ ಮಹಾವಿದ್ಯಾಲಯ, ಹುಬ್ಬಳ್ಳಿ ಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಕಬಡ್ಡಿ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ ಉದ್ಘಾಟನಾ ಸಮಾರಂಭ ಜರುಗಿತು. ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಜೆ ಎಮ್ ವಿ ಸಂಘದ ಗೌರವ ಕಾರ್ಯಾಧ್ಯಕ್ಷರಾದ ಅರವಿಂದ ಕುಬಸದ ವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂತರ್ ರಾಷ್ಟ್ರೀಯ ಸೈಕ್ಲೀಸ್ಟ್ ಮೇಘಾ ಗೋಗಾಡ, ಸಂದೇಶ ಉಪ್ಪಾರ, ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು. ಶ್ರೀಮತಿ ಮಹೇಶ್ವರಿಯವರು ಕಾರ್ಯಕ್ರಮವನ್ನು ಉದಗಟಿಸಿ ಸ್ವಾಗತಿಸಿದರು. ಸುನಿತಾ ಬಟ್ಟೂರ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶಿವಕುಮಾರ್ ಪ್ರಭಯ್ಯನವರಮಠ ಹಾಗೂ ಪ್ರೊ ಅಶ್ವಿನಿ ಇಂದರಗಿ ಅತಿಥಿ ಪರಿಚಯ ಮಾಡಿದರು. ಡಾ. ಗುರುರಾಜ ನವಲಗುಂದ ಮುಂತಾದವರಿದ್ದರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..
ವರದಿ.ಬಸವರಾಜ್. ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030