ಸಾವಿತ್ರಿ ಬಾಯಿ ಫುಲೆ
ಜನ್ಮದಿನಾಚರಣೆ
ತುಂಗಭದ್ರಾ ಪ್ರೌಢಶಾಲೆಯಲ್ಲಿ
ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ
ಬಿ ಇ ಓ ಎಸ್ ಎನ್ ಹಳ್ಳಿಗುಡಿ ಚಾಲನೆ
ಹೂವಿನ ಹಡಗಲಿ: ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಹೆಣ್ಣು ಮಕ್ಕಳ ಶಿಕ್ಷಣ ಸ್ವಾವಲಂಬನೆಗೆ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು ಎಂದು ಎ ಎಂ ಪಿ ಅಜ್ಜಯ್ಯ ಸಮಾಜಿಮುಖಿ ಟ್ರಸ್ಟ್ ನ
ಎ ಎಂ ಪಿ ವಾಗೀಶ್ ತಿಳಿಸಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಸೋಮವಾರ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂದಿನ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ವರದಕ್ಷಿಣೆ,
ಸತಿ ಸಹಗಮನ, ಕಂದಾಚಾರ ಮೊದಲಾದ
ಜ್ವಲಂತ ಸಮಸ್ಯೆಗಳಿಗೆ
ಧ್ವನಿ ಎತ್ತಿದ ಧೀಮಂತ ಮಹಿಳೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಎನ್ ಹಳ್ಳಿಗುಡಿ ಪತಿ ಜ್ಯೋತಿಬಾ ಫುಲೆ ಅವರ
ಸಹಕಾರದಿಂದ ಓದಿ
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.
ಇದೇ ವೇಳೆ ಆರೋಗ್ಯ ಇಲಾಖೆಯ ವತಿಯಿಂದ
ಶಾಲಾ ವಿದ್ಯಾರ್ಥಿಗಳಿಗೆ
ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಿಕ್ಷಕರಾದ ದ್ವಾರಕೀಶ್ ರೆಡ್ಡಿ ಕೆ ಬಸವರಾಜ
ಜಿ ಆನಂದ, ಲಂಬಾಣಿ ಗಿಡ್ಡಾನಾಯ್ಕ್, ಪ್ರತಿಮಾ ಎನ್, ಗೀತಾ ಪಿ ಎಂ,
ವೈ.ಜಯಮ್ಮ ಲಾವಣ್ಯ ಜಿ, ರೇಖಾ ಎಸ್,
ಸಂತೋಷ್ ಕುಮಾರ್ ಸೊಪ್ಪಿನ, ಜೆ ಎಸ್ ಎಸ್
ಶಿಕ್ಷಣ ಮಹಾವಿದ್ಯಾಲಯ
ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿ ಹಾಜರಿದ್ದರು…
ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030