ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಲ್ಲಳ್ಳಿ ಗೊಲ್ಲರಗಟ್ಟಿ ಗ್ರಾಮ, ಈವರೆಗೂ ಚರಂಡಿಯನ್ನೇ ಕಂಡಿಲ್ಲದಂತಹ ಕುಗ್ರಾಮವಾಗಿದೆ.ಸುಮಾರು100 ಮನೆಗಳಿರುವ ಈ ಗ್ರಾಮದಲ್ಲಿ ರಸ್ಥೆಯೇ ಚರಂಡಿಯಾಗಿದ್ದು,ಈವರೆಗೂ ಕಾಲುವೆ ಅಥವಾ ಚರಂಡಿ ಕಂಡಿಲ್ಲವೆಂದು ಕೆಲ ಗ್ರಾಮಸ್ಥರು ದೂರಿದ್ದಾರೆ.
ಬಚ್ಚಲ ಮೋರಿಯ ತ್ಯಾಜ್ಯ ನೀರು ರಸ್ಥೆಯಲ್ಲಿ ಹರಿಯುತ್ತಿದೆ,ರಸ್ಥೆಗಳೇ ಚರಂಡಿ ಕಾಲುವೆಗಳಾಗಿ ಮಾರ್ಪಟ್ಟಿವೆ.ಇದರಿಂದಾಗಿ ಸೊಳ್ಳೆಗಳ ಹಾವಳಿ ಮಿತಿ ಮೀರಿದ್ದು,ಗ್ರಾಮದ ಎಲ್ಲೆಡೆಗಳಲ್ಲಿ ಕೆಸರು ಗದ್ದೆ ನಿರ್ಮಾಣವಾಗಿದೆ.ಕಸ ಕೆಸರಲ್ಲಿ ಕೊಳೆತ ಪರಿಣಾಮ ಬೀದಿಗಳಲ್ಲಿ ಗಬ್ಬುನಾಥ ಹರಡಿ,ನೈರ್ಮಲ್ಯತೆ ಕಾಣದಾಗಿ ಸಾಂಕ್ರಮಿಕ ರೋಗಗಳು ತಾಂಡವಾಡುತ್ತಿವೆ.ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದ್ದು,ಈ ವರೆಗೂ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030