ಶಿಕ್ಷಕರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ಹಾಗೂ ಆಲೂರು ಸಿ.ಆರ್.ಸಿ.ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀ ಗಿರಿಧರನಾಯ್ಕ ಪದವಿದರೇತರ ಮುಖ್ಯಗುರುಗಳು ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ,ಬಡ್ತಿಮುಖ್ಯಗುರುಗಳು ಸ.ಹಿ.ಪ್ರಾ.ಶಾಲೆ ಜುಟ್ಟಲಿಂಗನಹಟ್ಟಿ ಯ ಶ್ರೀ ಎಂ.ಎಸ್.ತಿಪ್ಪೇಸ್ವಾಮಿ(ಮಾಡರ್ನ್ ಟೈಲರ್)ಹಾಗೂ ಕೋಣನಮರಿಸ್ವಾಮಿ ಉ.ಸ.ಹಿ.ಪ್ರಾ.ಶಾಲೆಯ ಶ್ರೀ ಎಚ್.ವಿ.ಕಲ್ಲೇಶ್ ಇವರುಗಳು ವಯೋನಿವೃತ್ತಿ ಹೊಂದಿರುವರು. ಇಲಾಖೆ ಯಲ್ಲಿ ಸರಿ ಸುಮಾರು 30ವರ್ಷಗಳ ಕಾಲ ಸೇವೆಸಲ್ಲಿಸಿದ್ದು ಇಲಾಖೆಯ ಹಾಗೂ ಮಕ್ಕಳ ಮನಸ್ಸನ್ನು ಗೆದ್ದು ಉನ್ನತಮಟ್ಟದ ಸೇವೆಸಲ್ಲಿಸಲಾಗಿದೆ.ಇವರಸೇವೆ ಅವಿಸ್ಮರಣೀಯ. ಇವರುಗಳನ್ನು ಪ್ರೀತಿ ಆದರಗಳಿಂದ ಎರಡು ಸಿ.ಆರ್.ಸಿ ಯ ಶಿಕ್ಷಕಬಳಗದಿಂದ ಬೀಳ್ಕೊಡುಗೆ ಮಾಡಲಾಯಿತು. ವಯೋನಿವೃತ್ತಿ ಶಿಕ್ಷಕರು ವೃತ್ತಿ ಜೀವನದ ಅನಿಸಿಕೆಗಳನ್ನು ಹಂಚಿಕೊಳ್ಳಲಾಯಿತು.ಇಂದಿನ ಇಲಾಖೆ ಹಾಗೂ ಕೋವಿಡ್ ಒತ್ತಡಗಳ ಮಧ್ಯ ಸುಖಾಂತವಾದ ನಿವೃತ್ತಿ ನಮ್ಮ ಸೌಭಾಗ್ಯ ವೇ ಸರಿ ಎಂದು ಅನಿಸಿಕೆ ಹಂಚಿಕೊಂಡರು.ಕಾರ್ಯಕ್ರಮ ದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಬೀಳ್ಕೊಡುಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಶಾಮಸುಂದರ ಸಪಾರೆ,ಮಹದೇವಪ್ಪ ,ಮಂಜುಳ,ಪಿ.ಜಗದೀಶ್.
ಹಾಲೇಶ್,ಚೌಡಪ್ಪ,ಸಿ.ಆರ್.ಪಿಗಳಾದ ಶ್ರೀ ಲೋಕೇಶ್ ಎನ್.ಎಸ್.ಶ್ರೀ ಸಿದ್ದೇಶ್ವರ ಜಿ.ಟಿ.ಹಾಗೂ ಪ್ರಕಾಶ್ ಜಿ.ಬಿ.ಗೌರವ ಅಧ್ಯಕ್ಷರು ಕ.ರಾ.ಸ.ಶಿ.ಸಂಘ ಕೂಡ್ಲಿಗಿ ಘಟಕ ಇವರುಗಳು ಉಪಸ್ಥಿತರಿದ್ದರು.
ವರದಿ ಕೆ ಎಸ್ ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030