ವರದಿ. ಮಂಜುನಾಥ್, ದೊಡ್ಡಮನಿ
*ಹೊಸಪೇಟೆ:ದೀನ ದಲಿತರು ಮುಖ್ಯವಾಹಿನಿಗೆ ಬರಬೇಕು-ಸಚಿವ ಆನಂದ್ ಸಿಂಗ್*<> ಬಳ್ಳಾರಿ ಜಿಲ್ಲೆ ಹೊಸಪೇಟೆ: ಗಣರಾಜ್ಯೋತ್ಸವ ಅಂಗವಾಗಿ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿ,150ಅಡಿ ಎತ್ತರದ ಧ್ವಜ ಸ್ಥಂಬದಲ್ಲಿ ಧ್ವಜಾರೋಹಣ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು,ದೀನ ದಲಿತರು ಮುಖ್ಯವಾಹಿನಿಗೆ ಬರಬೇಕು ಹಾಗೂ ಶೈಕ್ಷಣಿಕಾಭಿವೃದ್ಧಿ ಹೊಂದಬೇಕು.ದೀನ ದಲಿತರ ಉದ್ಧಾರವಾದಲ್ಲಿ ಮಾತ್ರ ಗಣರಾಜ್ಯೋತ್ಸವದ ಆಶಯಗಳು ಈಡೇರಿಂದಾತಾಗುತ್ತದೆ ಎಂದು. ದಲಿತರಿಗೆ ಎಲ್ಲಾ ಹಕ್ಕುಗಳು ಹಾಗೂ ಸೌಕರ್ಯಗಳು ದೊರಕಬೇಕು ಎಂದರು.
ಬಹುದಿನಗಳ ಬೇಡಿಕೆಯಾದ ವಿಜಯನಗರ ಜಿಲ್ಲೆ ರಚನೆ ಸಂಬಂಧ ಅಧಿಕೃತ ಆದೇಶ ಹೊರಬೀಳುವ ಅಷ್ಟೇ ಬಾಕಿ ಉಳಿದಿದೆ.ಕೆಲವೇ ದಿನಗಳಲ್ಲಿ ಈ ಸಂಬಂಧ ಆದೇಶ ಸರ್ಕಾರ ಹೊರಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯನಗರ ವಿಜಯೋತ್ಸವಕ್ಕೆ ದೊಡ್ಡ ಮಟ್ಟದ ಸಿದ್ಧತೆಗೆ ರಾಜ್ಯ ನೋಡುವಂತೆ,ವಿಜಯನಗರ ವಿಜಯೋತ್ಸವ ಆಚರಿಸಲಾಗುವುದು ಎಂದರು.
*ವಿಜಯೋತ್ಸಕ್ಕೆ ಗಣ್ಯಾತಿಗಣ್ಯರ ಅಗಮನ*- ವಿಜಯ ನಗರ ವಿಜಯೋತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ,ರಾಜ್ಯದ ಗಣ್ಯಾತಿ ಗಣ್ಯರು ಹಾಗೂ ಅನೇಕ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು. ಪೌರಾಯುಕ್ತ ಮನ್ಸೂರ್ ಅಲಿ,ತಾಪಂ ಅಧ್ಯಕ್ಷ ನಾಗವೇಣಿ ಬಸವರಾಜ್, ತಹಶೀಲ್ದಾರರಾದ ಎಚ್. ವಿಶ್ವನಾಥ್,ಸೇರಿದಂತೆ ಜನಪ್ರತಿನಿಧಿಗಳು ವಿವಿದ ಇಲಾಖಾಧಿಕಾರಿಗಳು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030