ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭ…!!!

Listen to this article

ನಾನು ಬಾಣದ ಗುರುತಿನಲ್ಲಿ ಗೆದ್ದಿದ್ದು, ನಂತರ ಕಾಂಗ್ರೆಸ್ ಗೆ ಹೋದಾಗ ಎಲ್ಲರೂ ಕೂಡ ನನ್ನನ್ನು ಈ ಹಿಂದೆ ಕಾಂಗ್ರೆಸ್ ಗೆ ಯಾಕೆ ಹೋದ್ರಿ ಎಂದು ಪ್ರಶ್ನಿಸಿದ ಜ‌ನರೇ ಆಂಜನೇಯ ಅವರನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸಿದರು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಾಣದ ಗುರತಿನಲ್ಲಿದ್ದ ಮಾಜಿ ಶಾಸಕ ಆಂಜನೇಯ ಕಾಂಗ್ರೆಸ್ ಗೆ ಹೋದರು, ಕಾಂಗ್ರೆಸ್ ಗೆ ಹೋದ ನನ್ನನ್ನು ಸೋಲಿದಂಗೆ ಇಂದು ಆಂಜನೇಯ ಅವರನ್ನು ಕೂಡ ಮತದಾರರು ಮತ ಹಾಕದಂತೆ ಸೋಲಿಸಿದ್ದಾರೆ. ಇದನ್ನು ಆಂಜನೇಯ ಅರ್ಥ ಮಾಡಿಕೊಳ್ಳಬೇಕು ಎಂದರು.

2008 ರಲ್ಲಿ‌ ಗೆಲ್ಲಿಸಿ ಮತ್ತೆ ಸೋಲಿಸಿದ್ರಿ, 2013 ರಲ್ಲಿ ಬಿಜೆಪಿ ಕೆಜೆಪಿ ಆಗಿದ್ದರಿಂದ ಕಾಂಗ್ರೆಸ್ ಆಡಳಿತಕ್ಕೆ ಬರಲು ಸಾಧ್ಯವಾಯ್ತು, ಈ ಎರಡೂ ಚುನಾವಣೆಯಲ್ಲಿ ನನ್ನ ತಪ್ಪಿನಿಂದ ನಾನು ಸೋತೆನೆ ಹೊರೆತು ಆಂಜನೇಯ ವ್ಯಕ್ತಿತ್ವದಿಂದಲ್ಲ, ನನ್ನ ತಪ್ಪಿನಿಂದ ಗೆದ್ದ ಆಂಜನೇಯ ಮಂತ್ರಿಯಾಗಿ ಚಿತ್ರಹಳ್ಳಿಯಲ್ಲಿ‌ ಕಾಲೇಜ್ ಕಟ್ಟಿಸಿ‌ ನಾನು ಮಾಡಿದ್ದು ಎಂದು ಹೇಳುತ್ತಾರೆ. ಆದರೆ ನಾನು ಗುಡ್ಡಗಾಡಿನಲ್ಲಿ ಎಸ್ಸಿ ಎಸ್ಟಿ ವಸತಿ ನಿಲಯಗಳನ್ನು ಕಟ್ಟಿಲ್ವ ಎಂದು ಪ್ರಶ್ನಿಸಿದರು.

ಒಬ್ಬ ಕ್ಷೇತ್ರದ ಶಾಸಕರಾಗಲಿ ಸಚಿವರಾಗಲಿ ಕೆಲಸ ಮಾಡಬೇಕಾಗುತ್ತದೆ. ನಾನು ಚಿತ್ರಹಳ್ಳಿ, ಮಲ್ಲಾಡಿಹಳ್ಲಿಯಲ್ಲಿ ಎರಡು ಸ್ಟೇಷನ್ ತಂದಿದ್ದೇನೆ ಎಂದರು…

ವರದಿ, ಸುರೇಶ್ ಹೊಳಲ್ಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend