ಹೂವಿನ ಹಡಗಲಿ
ಗಣಿತ ಶಿಕ್ಷಕರ ವೇದಿಕೆ
ಪದಾಧಿಕಾರಿಗಳ ಆಯ್ಕೆ
ಹೂವಿನ ಹಡಗಲಿ: ಪ್ರೌಢಶಾಲೆಗಳಲ್ಲಿ ವಿನೂತನ ಗಣಿತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು
ಎಂದು ತಾಲೂಕು ಗಣಿತ ಶಿಕ್ಷಕರ ವೇದಿಕೆಯ ಅಧ್ಯಕ್ಷ
ಕೋರಿ ವಿಶ್ವನಾಥ ಹೇಳಿದರು.
ಪಟ್ಟಣದ ಜಿ ಪಿ ಜಿ ಪದವಿ ಪೂರ್ವ ಕಾಲೇಜಿನಲ್ಲಿ
ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಗಣಿತ ಶಿಕ್ಷಕರ ವೇದಿಕೆ ರಚನೆ ಸಭೆಯಲ್ಲಿ
ಅವರು ಮಾತನಾಡಿದರು.
ಗಣಿತ ವಿಷಯವನ್ನು
ಸರಳವಾಗಿ ಸುಲಭವಾಗಿ
ಮಕ್ಕಳು ಕಲಿಯುವಂತೆ ಮಾಡುವುದು ಪ್ರತಿಯೊಬ್ಬ
ಗಣಿತ ಶಿಕ್ಷಕರ ಆದ್ಯ ಕರ್ತವ್ಯವಾಗಬೇಕು.
ಕಠಿಣ ಲೆಕ್ಕ ಪ್ರಮೇಯ
ಮೊದಲಾದ ಕ್ಲಿಷ್ಟಕರ
ಅಂಶಗಳನ್ನು ಮನವರಿಕೆ ಮಾಡಿ ಗಣಿತದಲ್ಲಿ ಆಸಕ್ತಿ
ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್ ಧರ್ಮಾನಾಯ್ಕ್ ಗಣಿತ
ವಿಷಯ ಶಿಕ್ಷಕರ ತರಬೇತಿ
ಕಾರ್ಯಾಗಾರಗಳು
ಸಂಘಟಿಸಲು ಉಪಯುಕ್ತ ಮಾಹಿತಿ ನೀಡಿದರು.
ಗಣಿತ ಶಿಕ್ಷಕರ ವೇದಿಕೆಯ
ನೂತನ ಪದಾಧಿಕಾರಿಗಳು
ಜಿ ಎಂ ಕಾಂತೇಶ್ (ಗೌರವ ಅಧ್ಯಕ್ಷ)
ಕೋರಿ ವಿಶ್ವನಾಥ (ಅಧ್ಯಕ್ಷ)
ಗಂಗಮ್ಮ ಹಕ್ಕಂಡಿ (ಉಪಾಧ್ಯಕ್ಷೆ)
ಪ್ರಕಾಶ ದಳವಾಯಿ (ಕಾರ್ಯದರ್ಶಿ)
ಜಯಶ್ರೀ ಬಿ (ಖಜಾಂಚಿ) ಜಡೆಸಿದ್ದೇಶ್ವರ ಎಂ (ಸಂಘಟನಾ ಕಾರ್ಯದರ್ಶ) ಮಲ್ಲಿಕಾರ್ಜುನ ಬಿ,
ವೀರೇಶ ರೇವಡಿ, ಕುಮಾರೇಶ ಎಂ,
ಹೆಚ್ ಸತೀಶ್,
ಮಮತಾ ಜಿ,
ವಾಣಿ ಎಸ್ ವಿ,
ಆರ್ ಆನಂದಮೂರ್ತಿ,
ಚೇತನ ಎಸ್ ಹೆಚ್ ಶಿವಕುಮಾರ ಗಡ್ಡಿ ,
ಕವಿತಾ,
ಪ್ರವೀಣಕುಮಾರ ಮತ್ತು ಸುಂಕದ ಸಂಗಮೇಶ್ ರವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು…
ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030