ಎಂ,ಪಿ,ರವೀಂದ್ರ ಅವರ ದಾರಿಯಲ್ಲಿ ಸಾಗುವ ನಾಯಕಿ ಎಂ,ಪಿ,ವೀಣಾ ಮಹಾಂತೇಶ್!
ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ಎಂ,ಪಿ,ರವೀಂದ್ರ ಅವರಿಗೆ ಮಸೀದಿ, ಮಂದಿರ ಎಂದರೆ ಅಭಿವೃದ್ಧಿ ಪಡಿಸುವುದೇ ಗುರಿಯಾಗಿತ್ತು. ಕ್ಷೇತ್ರದಾದ್ಯಂತ ಹಲವು ಮಸೀದಿ, ಮಂದಿರಗಳಿಗೆ ಭೇಟಿನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪಟ್ಟಿಮಾಡಿ ಸರ್ಕಾರದಿಂದ ಸಿಗುವ ಅನುದಾನದ ಜೊತೆಗೆ ತಮ್ಮ ಸ್ವಂತ ಖರ್ಚಿನಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದು ವಿಶೇಷ!!
ತನ್ನ ಅಣ್ಣನ ದಾರಿಯಲ್ಲಿ ಸಾಗುವ ಭರವಸೆಗೆ ಮುಂದಡಿ ಇಟ್ಟ ಎಂ,ಪಿ,ವೀಣಾ ಅವರು ತಮ್ಮ ಸಹಚರರ ಜೊತೆಗೆ ಕ್ಷೇತ್ರದ ಕಡತಿ ಗ್ರಾ.ಪಂ ವ್ಯಾಪ್ತಿಯ ನಂದ್ಯಾಲ ಗ್ರಾಮದ ಚಮನ್ಷಾವಲಿದರ್ಗಾ ಕ್ಕೆ ಭೇಟಿನೀಡಿ ಸ್ವಾಮಿಯ ಆಶೀರ್ವಾದ ಪಡೆದು, ಅಲ್ಲಿನ ಕೆಲವು ಕೆಲಸಗಳನ್ನು ಮುಂಬರುವ ದಿನಗಳಲ್ಲಿ ನೆರವೇರಿಸುವ ಭರವಸೆಯನ್ನಿತ್ತರು…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030