ಎಂಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್(ರಿ) ಹರಪನಹಳ್ಳಿ ಹಾಗೂ ಫಲದಾಯಿ ಫೌಂಡೇಶನ್(ರಿ) ಬೆಂಗಳೂರು
ಇವರ ಸಂಯೋಗದಲ್ಲಿ ಇಂದು 23/7/2021 ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ 100 ಸಾವಯವ ಆಹಾರದ ಕಿಟ್ ವಿತರಿಸಲಾಯಿತು.
ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ_ಪಿ_ವೀಣಾ_ಮಹಾಂತೇಶ್ ಅವರ ಕಾಳಜಿಗೆ ಹಿಡಿದ ಕೈಗನ್ನಡಿಯಂತೆ ಬಡವರ ಮೇಲಿನ ಅವರ ಕಾಳಜಿಗೆ ಬೆಂಗಳೂರಿನ_ಫಲದಾಯಿ_ಫೌಂಡೇಶನ್ ಅವರು ನೀಡಿದ ಹಲವಾರು ಕಿಟ್ ಗಳೊಂದಿಗೆ ತಾವೂ ಕೂಡ ಕೈಜೋಡಿಸಿ ಆ ಭಾಗದ ಬಡವರಿಗೆ ಆಹಾರದ ಕಿಟ್ ವಿತರಿಸಿರುವುದು ಹೆಮ್ಮೆಯ ವಿಷಯ!
ಬಡವರ ಬಗೆಗಿನ ಇವರ ಕಾಳಜಿಗೆ ಆ ಭಾಗದ ಜನ ಅಭಿನಂದನೆಗಳನ್ನು ಸಲ್ಲಿಸಿ, ಇಂತಹ ನಾಯಕಿ ನಮ್ಮ ಪಾಲಿಗೆ ಸಿಕ್ಕಿರುವುದು ಅದೃಷ್ಟದಾಯಕ ಎಂದು ಹಾರೈಸಿದರು.
ಮಂಜುಳಾ ಜಗದೀಶ್ ಗೌಡ ತಾಲೂಕ ಪಂಚಾಯತಿ ಸದಸ್ಯರು ಮತ್ತು ಜಗದೀಶ್ ಪಾಟೀಲ್ ಉಳ್ಳಾಗಡ್ಡಿ ಬಸಣ್ಣ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಜಿ ನಿಂಗನಗೌಡ ಮತ್ತು ಮಹೇಶ್ ದುಗ್ಗಾವತಿ ಸಿದ್ದಲಿಂಗನಗೌಡ ವಕೀಲರು ಚಂದ್ರು ಯರಬಾಳು ರಾಜು ಕೆ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ಮತ್ತು ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..