137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ಸಾಕ್ಷಿಯಾದ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಎಂ,ಪಿ,ವೀಣಾ ಮಹಾಂತೇಶ್!!
ಇಂದು ದೇಶದಾದ್ಯಂತ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ತಮ್ಮ ಹರಪನಹಳ್ಳಿಯ ಗೃಹ ಕಛೇರಿಯಲ್ಲಿ ಕಾಂಗ್ರೆಸ್ ಕಟ್ಟಾಳುಗಳ ಭಾವಚಿತ್ರಗಳಿಗೆ ನಮನ ಸಲ್ಲಿಸುವ ಮೂಲಕ ವಿಶೇಷವಾಗಿ ಆಚರಿಸಿದ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾ ಮಹಾಂತೇಶ್ ಅವರು, ಮಾತನಾಡಿ, ಭಾರತದ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ಮಹತ್ವದೊಂದಿಗೆ 1885ರ ಡಿಸೆಂಬರ್ 28ರಂದು ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ ಸ್ಥಾಪನೆಯಾಯಿತು.
ಇದು ಭಾರತೀಯರನ್ನು ಒಟ್ಟುಗೂಡಿಸಿ, ಅವರ ಧ್ವನಿಯನ್ನು ಪ್ರತಿನಿಧಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಜೀವ ಸೆಲೆಯಾಯಿತು.
ತ್ಯಾಗ, ಬಲಿದಾನ, ಸಮರ್ಪಣೆಯ ಮೂಲಕ ಗಳಿಸಿದ ಸ್ವಾತಂತ್ರ್ಯದ ಸಾರ್ಥಕತೆಗೆ ಅಡಿಪಾಯವಾಯಿತು. ದೇಶದ ಸಮಗ್ರ ವಿಕಾಸಕ್ಕೆ ಶ್ರಮಿಸಿದ ಕಾಂಗ್ರೇಸ್, ದೇಶ ಹಾಗೂ ಜನರ ಹಿತಕ್ಕಾಗಿ ತನ್ನ ಕಾರ್ಯಗಳನ್ನು ಮುಂದುವರಿಸಲಿದೆ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು…
ವರದಿ. ಪ್ರತಾಪ್, ಸಿ ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030