ಗ್ರಾಮ ಪಂಚಾಯತಿ ಸದಸ್ಯರಿಗೆ ಮತದಾನದ ಅಧಿಕಾರ ಕೊಡಿಸಿದ ನಾಯಕ ಕೊಂಡಯ್ಯನವರಿಗೇ ಮತ ಹಾಕಿ, ಎಂ.ಪಿ.ಲತಾ ಮಲ್ಲಿಕಾರ್ಜುನ್..
ಪುಣಭಗಟ್ಟ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಮಾನ್ಯ ಕೆ.ಸಿ. ಕೊಂಡಯ್ಯ ಧೀಮಂತ ನಾಯಕರು, 1996 ರಲ್ಲಿ ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಯಾವುದೋ ಒಂದು ಕಾರಣಕ್ಕೆ ಬಿಟ್ಟು ಹೋಗಿದ್ದ ಮತದಾನದ ಅಧಿಕಾರವನ್ನ ಮಾನ್ಯ ದೆವೇಗೌಡರ ಮೇಲೆ ಒತ್ತಡ ತಂದು ಮತಾಧಿಕಾರ ಕೊಡಿಸಿದ ಧೀಮಂತ* *ನಾಯಕಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.*
*ಅವರು ಹರಪನಹಳ್ಳಿ ತಾಲೂಕು ಪುಣಭಗಟ್ಟ ಗ್ರಾಮದಲ್ಲಿ ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಗ್ರಾಮ ಪಂಚಾಯತಿ ಸದಸ್ಯರಿಗೆ ಐಡೆಂಟಿಟಿ ಸಿಗಬೇಕಾಗಿದ್ದರೆ ಮತ್ತೊಮ್ಮೆ ಮಾನ್ಯ ಕೊಂಡಯ್ಯನವರಿಗೆ ಮತ ನೀಡಿ ವಿಧಾನಪರಿಷತ್ ಗೆ ಕಳುಹಿಸಿ ಕೊಡಿ ಎಂದು ಮನವಿ ಮಾಡಿದರು.ಸಭೆಯಲ್ಲಿ ಪುಣಭಗಟ್ಟ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಮುಖಂಡರು ಭಾಗವಹಿಸಿದ್ದರು…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030