ನಮ್ಮೆಲ್ಲರ ದಿವ್ಯ ಚೇತನ, ಸ್ಫೂರ್ತಿ ನಮ್ಮ ಅಪ್ಪಾಜಿ ದಿ” ಶ್ರೀ ಎಂ. ಪಿ. ಪ್ರಕಾಶ್, ಕರ್ನಾಟಕದ ಮಾಜಿ ಉಪಮುಖ್ಯ ಮಂತ್ರಿಗಳು ,ಮೌಲ್ಯಾಧಾರಿತ ಶ್ರೇಷ್ಠ ರಾಜಕಾರಣಿ, ಚಿಂತಕರು , ಸಾಹಿತಿ , ರಂಗ ಕಲಾವಿದರು ,ಸಾಂಸ್ಕೃತಿಕ ರಾಯಭಾರಿ , ಉತ್ತಮ ವಾಗ್ಮಿಗಳು ಹಾಗೂ ವಿಜಯನಗರ “ಹಂಪಿ ಉತ್ಸವ” ಆಚರಣೆಯ ರೂವಾರಿಗಳು ಇವರ 81 ನೇ ಹುಟ್ಟು ಹಬ್ಬದ ನಿಮಿತ್ಯ ಆಶಾ ಕಾರ್ಯಕರ್ತರಿಗೆ , ಅಸಂಘಟಿತ ಮಹಿಳಾ ಕಾರ್ಮಿಕರಿಗೆ , ದೇವದಾಸಿಯರು, ವಿವಿಧ ತಳ ಸಮುದಾಯದ ಮಹಿಳೆಯರು ಒಟ್ಟು 1000 ಮಹಿಳೆಯರಿಗೆ ಉಡಿ ತುಂಬುವ ಮತ್ತು ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಶ್ರೀ ಚನ್ನಬಸವ ಶಿವಯೋಗಿ ಸ್ವಾಮಿಗಳು , ಗುಡ್ಡದ ವಿರಕ್ತಮಠ , ನೀಲಗುಂದ ಅವರು ದಿವ್ಯ ಸಾನಿಧ್ಯವಹಿಸಿದ್ದರು. ಡಾ ಮಹಾಂತೇಶ್ ಚರಂತಿಮಠ , ಡಾ ಶ್ರೀನಿವಾಸನ್ ವೇಲು , ಡಾ ಹೇಮಾವತಿ , ಶ್ರೀಮತಿ ರೇಣುಕಮ್ಮ , ಶ್ರೀ ಮಂಜಪ್ಪ ಹಲಗೇರಿ , ಶ್ರೀ ನಿಚ್ಛವನಹಳ್ಳಿ ಭೀಮಪ್ಪ , ಸಾಸ್ವಿಹಳ್ಳಿ ಗ್ರಾಮ ಪಂಚಾಯತಿಯ ಮುಖಂಡರಾದ ವಾಮನ ಗೌಡರು ಗ್ರಾಮ ಪಂಚಾಯತಿ ಸದಸ್ಯರಾದ ಕೊಟ್ರಪ್ಪ ನಿಚಪೂರ ಬಸನಗೌಡರು ಬೆಣ್ಣೆಹಳ್ಳಿಯ ಬಿ ಕೆ ರವಿ ಕುಮಾರ್ ಸೋನಿಯಾ ಗಾಂಧಿ ಬ್ರಿಗೇಡ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಗಾಯತ್ರಿದೇವಿ ಮಾಜಿ ಪುರಸಭಾ ಅಧ್ಯಕ್ಷರಾದ ಕವಿತಾ ವಾಗೇಶ ,ಮಾದಾಪುರ ಬಸವರಾಜ್ ವಕೀಲರು ಸಿದ್ದನಗೌಡರ ,ತಿಮ್ಲಾಪುರ ನಾಗರಾಜ್ ನಿಚ್ಚವನ ಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ದೇವೇಂದ್ರಪ್ಪ , ದುಗ್ಗಾವತಿ ಗ್ರಾಮದ ಚಂದ್ರು ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ, ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ ಸಿ , ಮದ್ದಾನಸ್ವಾಮಿ ಗುರುರಾಜ್ ಇನ್ನೂ ಅನೇಕ ಯುವ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು..
ವರದಿ.ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030