ಹರಪನಹಳ್ಳಿಗೆ ಹೋಗುವ ದಾರಿ ಮದ್ಯದಲ್ಲಿ ಕೊಟ್ಟೂರು ತಾಲೋಕು ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು…!!!

Listen to this article

ಶ್ರೀ ಪವನ್ ಕುಮಾರ್ ಮಾಲ್ ಪಾಟಿ, ಮಾನ್ಯ ಜಿಲ್ಲಾಧಿಕಾರಿಗಳು ಬಳ್ಳಾರಿ ಇವರು ದಿನಾಂಕ: 05.06.2021 ಹರಪನಹಳ್ಳಿಗೆ ಹೋಗುವ ಮಾರ್ಗಮಧ್ಯದಲ್ಲಿ ಕೊಟ್ಟೂರು ತಾಲೂಕ ಕಛೇರಿಗೆ ಭೇಟಿ ನೀಡಿ ನಂತರ ದಿನಾಂಕ: 03.06.2021 ರಂದು ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕೊಟ್ಟೂರು ಪಟ್ಟಣದ ಹ್ಯಾಳ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ನಗರದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಬಗ್ಗೆ ಮಾಹಿತಿಯನ್ನು ತಹಶೀಲ್ದಾರರಿಂದ ಪಡೆದು ಸ್ಥಳಕ್ಕೆ ಭೇಟಿ ನೀಡಿದರು. ನಂತರ ಪರಿಶೀಲಿಸಿ ಹಾಲೀ ಇರುವ ಚರಂಡಿಯನ್ನು ಕೂಡಲೇ ಸ್ವಚ್ಛಗೊಳಿಸುವುದರ ಜೊತೆಗೆ ಇನ್ನೂ ಚರಂಡಿಯ ಕಾಲುವೆಯನ್ನು ಅಗಲ ಮಾಡುವಂತೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಮಯದಲ್ಲಿ ಮುಖ್ಯಾಧಿಕಾರಿ ಟಿ ಎಸ್ ಗಿರೀಶ್, ಸಿಪಿಐ ದೊಡ್ಡಣ್ಣ, ಪಿಎಸ್ಐ ನಾಗಪ್ಪ, ಕಂದಾಯ ನಿರೀಕ್ಷಕರು ಹಾಲಸ್ವಾಮಿ, ಗ್ರಾಮ ಲೆಕ್ಕಿಗರಾದ ಕೊಟ್ರೇಶ್, ರಮೇಶ, ಸೌಭಾಗ್ಯ ಇದ್ದರು.ತಹಶೀಲ್ದಾರ್, ಕೊಟ್ಟೂರು

ವರದಿ.ಬಸಣ್ಣಿ ಬಣವಿಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend