ಕೃಷ್ಣಾಪುರ ಗ್ರಾಮ ಘಟಕ ಉದ್ಘಾಟನೆ!! ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಿನಾಂಕ 23.08.2028ರ ಮಂಗಳವಾರ ನಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪೇಡರೇಶನ್, ಸಿಐಟಿಯು ನೇತೃತ್ವದಲ್ಲಿ ಕೃಷ್ಣಾಪುರ ಗ್ರಾಮ ಘಟಕ ಉದ್ಘಾಟನೆ ಮಾಡಿದರು ಈ ಕಾರ್ಯಕ್ರಮವನ್ನು ಕಟ್ಟಡ ಹಾಗೂ ಇತರ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯುನ ಜಿಲ್ಲಾ ಪದಾಧಿಕಾರಿಯಾದ ಕೂಡ್ಲಿಗಿಯ ಗುನ್ನಳ್ಳಿ ರಾಘವೇಂದ್ರ ರವರು ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸುವ ಜವಾಬ್ದಾರಿಯುತ ಕೆಲಸವನ್ನು ನಮ್ಮ ಫೆಡರೇಶನ್ ವತಿಯಿಂದ ಕೊಡಿಸುವುದರೊಂದಿಗೆ ಯಾವಾಗಲೂ ನಾವು ಕಾರ್ಮಿಕರ ಜೊತೆ ಸದಾಕಾಲ ನಾವುಗಳು ಇರುತ್ತೇವೆ ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಯು ಬಸವರಾಜ್, ಹಾಗೂ ಜಿಲ್ಲಾ ಮತ್ತು ತಾಲೂಕು ಸಮಿತಿ ಮುಖಂಡರುಗಳು ಹಾಗೂ ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು..
ವರದಿ. ಬಸಪ್ಪ, ಬಣವಿಕಲ್ಲು (ಅಂಗಡಿ )
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030