ರಸ್ತೆ ಅಪಘಾತ ಯುವಕ ಸಾವು…!!!

Listen to this article

ರಸ್ತೆ ಅಪಘಾತ ಯುವಕನ ಸಾವು
ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಬುಡ್ಗ ಜಂಗಮ ಶಿವಕುಮಾರ (17) ಮೃತ ಯುವಕ ವಿಧಿ ಎಂಥಾ ಕ್ರೂರಿ ಅಲ್ವಾ.ಜೀವನ ಮತ್ತು ಉದ್ಯೋಗಕ್ಕಾಗಿ ಬಟ್ಟೆಗಳು ಹಾಗೂ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ದಿನನಿತ್ಯ ದ್ವಿಚಕ್ರ ವಾಹನದಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದನು.ಎಂದಿನಂತೆ ಇಂದು(ಶನಿವಾರ) ಸಹ ಬೆಳಗಿನ ಜಾವ 5 ಗಂಟೆ 30 ನಿಮಿಷಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ವಿಧಿಯಾಟ ಬೇರೆಯಾಗಿತ್ತು ರಾಜ್ಯ ಹೆದ್ದಾರಿ ಹಳೇಕೋಟೆ ಮತ್ತು ತೆಕ್ಕಲಕೋಟೆ ಮಾರ್ಗ ಮಧ್ಯೆ ಜವರಾಯ ಕಾದು ಕುಳಿತ್ತಿದ್ದ.ಬಿ.ಕೆ ಶಾಂತಿಧಾಮ ಹತ್ತಿರ ಬೈಕ್ ಗೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರವಾದ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ.ತೆಕ್ಕಲಕೋಟೆ.ಪೋಲೀಸ ಠಾಣೆಯ ಪೊಲೀಸ್ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತ ದೇಹವನ್ನು ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಡಿಕ್ಕಿ ಹೊಡೆದು ನಾಪತ್ತೆಯಾಗಿರುವ ವಾಹನವನ್ನು ಪತ್ತೆ ಹಚ್ಚಿ ಮೃತ ಯುವಕನ ತಂದೆ ತಾಯಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಪೋಲೀಸ ಅಧಿಕಾರಿಗಳ ಮೇಲೆ ಇದೆ..

ವರದಿ.ಪಿ.ವಿರೇಶ್ ಹಳೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend