ಬೃಹತ್ ಸಮಾವೇಶ, ನಗರಕ್ಕೆ ಸಿಎಂ ಇಬ್ರಾಹಿಂ ಆಗಮನ – ಬಸವರಾಜ ನಾಡಗೌಡ.
ಸಿಂಧನೂರು :ಅ. 11.ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಯಿಂ ರವರು ಅಗಸ್ಟ್ 19 ರಂದು ನಗರಕ್ಕೆಆಗಮಿಸಲಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ತಿಳಿಸಿದರು.
ನಗರದ ಗಂಗಾವತಿ ರಸ್ತೆಯ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ.ಇಬ್ರಾಹಿಂ ರವರು ಪಿ. ಡಬ್ಯೂ ಡಿ. ಕ್ಯಾಂಪಿನ ಶಾಸಕರ ನಿವಾಸದಿಂದ ಕಮ್ಮವಾರಿ ಭವನದವರೆಗೆ ಬೈಕ್ ರ್ಯಾಲಿ ಮೂಲಕ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಈ ಒಂದು ಕಾರ್ಯಕ್ರಮದಲ್ಲಿ ಸಿಎಂ. ಇಬ್ರಾಹಿಂ ರವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲಾ ನಾಯಕರು ಬರಲಿದ್ದಾರೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಸೈಯದ್ ಹುಸೇನ್ ಸಾಹೇಬ ಶಾಸಕ ರಾಜ ವೆಂಕಟಪ್ಪ ನಾಯಕ ಅವರು ಹುಟ್ಟು ಹಬ್ಬದ ನಿಮಿತ್ತ ಮಾನ್ವಿಗೆ ಅ. 19.ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ರವರು ಪಾಲ್ಗೊಂಡು ನಂತರ ಸಂಜೆ 4 -00 ಘಂಟೆಗೆ ನಗರಕ್ಕೆ ಆಗಮಿಸಿಲಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರ್ಪಡೆ ಯಾದಾಗಿನಿಂದಲೂ ಎಲ್ಲಾ ವರ್ಗಗಳಿಂದ ಜನ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಂಧನೂರು ಮತ್ತು ಮಾನ್ವಿ ಖಚಿತವಾಗಿ ಮತ್ತೊಮ್ಮೆ ಗೆದ್ದೆ ಗೆಲ್ಲುತ್ತವೆ ಹಾಗೂ ರಾಯಚೂರು ಜಿಲ್ಲೆಯಲ್ಲಿ ಐದು ಕಲ್ಯಾಣ ಕರ್ನಾಟಕದಲ್ಲಿ 20 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲಿದೆ. ಬಿಜೆಪಿ ಪಕ್ಷದ ಸರ್ಕಾರ ಭ್ರಷ್ಟಾಚಾರ ಕೋಮುಗಲಭೆ ಆಡಳಿತದಿಂದ ಸಂಪೂರ್ಣ ವಿಫಲವಾಗಿದೆ. ರಾಯಚೂರು ಜಿಲ್ಲಾಯಾಧ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಲಾಗುವುದು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಲು ಪಕ್ಷ ಮುಂದಾಗಿದೆ. ದಲಿತ, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಕೇವಲ ಓಟುಬ್ಯಾಂಕ್ ಮಾಡಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಸೈಯದ್ ಹುಸೇನ್ ಸಾಹೇಬ ರವರಿಗೆ ಸ್ವಾಗತ ಮಾಡಿ ಜೆಡಿಎಸ್ ತಾಲೂಕು ಘಟಕ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಂ.ಡಿ ನದಿಮುಲ್ಲಾ, ಅಲ್ಲಮಪ್ರಭು ಪೂಜಾರ, ನಗರಸಭೆ ಸದಸ್ಯರಾದ ಎಸ್.ಪಿ ಟೇಲರ್, ಸೈಯದ್ ಆಸಿಫ್ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030