ಡಿ.ಎಸ್.ಡಬ್ಲ್ಯೂ ಭೇಟಿ, ಅಂಬೇಡ್ಕರ್ ವಸತಿ ಶಾಲೆಗೆ ಮೀಸಲಿಟ್ಟ ಭೂಮಿ ಪರಿಶೀಲನೆ….!!!

Listen to this article

ಡಿ.ಎಸ್.ಡಬ್ಲ್ಯೂ ಭೇಟಿ, ಅಂಬೇಡ್ಕರ್ ವಸತಿ ಶಾಲೆಗೆ ಮೀಸಲಿಟ್ಟ ಭೂಮಿ ಪರಿಶೀಲನೆ.

ಸಿಂಧನೂರು : ಅಗಷ್ಟ್ 3.ತಾಲೂಕಿನ ಗೋರೆಬಾಳ ಹೋಬಳಿಯ ಗೋರೆಬಾಳ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕಾಗಿ 2016 -17 ನೇ ಸಾಲಿನ ಅಯವ್ಯಯದಲ್ಲಿ ಸರ್ವೆ ನಂ.22/*/1 ನಲ್ಲಿ 8 ಎಕರೆ 21 ಗುಂಟೆ ಭೂಮಿ ಕರ್ನಾಟಕ ಸರ್ಕಾರ ರಾಜ್ಯಪಾಲರ ಪರವಾಗಿ ಪ್ರಾಂಶುಪಾಲರು ಅಂಬೇಡ್ಕರ್ ವಸತಿ ಶಾಲೆ ಹೆಸರಿಗೆ ಶಿವನಗೌಡ ತಂದೆ ಹನುಮಪ್ಪ ಗೋರೆಬಾಳ ರವರ ಭೂಮಿಯನ್ನು 1.98.8600 ರೂಪಾಯಿ ಹಣ ಕೊಟ್ಟು ಖರೀದಿ ಮಾಡಿದ್ದು, ಈ ಭೂಮಿಯಲ್ಲಿ ಖಾಸಗಿ ವ್ಯಕ್ತಿ ಸಾಗುವಳಿ ಮಾಡುತ್ತಿದ್ದಾರೆ.ಇವರ ಮೇಲೆ ಇದುವರೆಗೂ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲಾ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪೂರು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಹೇಶ ಪೋತದಾರ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ನಂತರ ಮಾತನಾಡಿದ ಅವರು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪೂರು ದೂರಿನ ಆಧಾರದ ಮೇಲೆ ಇಂದು ತಾಲೂಕಿನ ಗೋರೆಬಾಳ ಹೊಬಳಿಯ ಗೋರೆಬಾಳ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಭೂಮಿಯಲ್ಲಿ ಖಾಸಗಿ ವ್ಯಕ್ತಿ ಈ ಹಿಂದೆ ಸಾಗುವಳಿ ಮಾಡುತ್ತಿದ್ದು ಹುಲುಗಪ್ಪ ಮಲ್ಕಾಪೂರು ಹಾಗೂ ಪ್ರಾಂಶುಪಾಲರಿಂದ ತಿಳಿದು ಬಂದಿದೆ.ಇಂದು ಖುದ್ದು ಪರಿಶೀಲನೆ ಮಾಡಿದಾಗ ಪಿಳ್ಳಿಪಿಸಿರಿ ಬೆಳೆ ಬೆಳೆದಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರ ಮೇಲೆ ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.

ಪರಿಶೀಲನೆ ವೇಳೆಯಲ್ಲಿ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪೂರು ಮಾತನಾಡಿ ನಾವು ಅನೇಕ ಬಾರಿ ತಹಸೀಲ್ದಾರಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ,ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ಮಾಡಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡರು ಅಥವಾ ಸಂಬಂಧಪಟ್ಟ ಭೂಮಿಯಲ್ಲಿ ಸಾಗುವಳಿ ಮಾಡಿ ಬೆಳೆ ಬೆಳೆದಿದ್ದು ದಾಖಲೆ ಸಮೇತ ಜಿಪಿಎಸ್ ಪೋಟೋ,ವಿಡಿಯೋ ಚಿತ್ರೀಕರಣ ಸಿಡಿ ನೀಡಿದರು, ಅಧಿಕಾರಿಗಳು ಸಾಗುವಳಿದಾರರಿಂದ ಹಣ ಪಡೆದು ಸುಳ್ಳು ವರದಿ ತಯಾರು ಮಾಡಿ ತನಿಖೆಯ ಹಾದಿ ದಿಕ್ಕು ತಪ್ಪಿಸುತ್ತಿದ್ದಾರೆ.ಇದು ಹೀಗೆ ಮುಂದುವರಿದರೆ ಸಂಬಂಧಪಟ್ಟ ಅಧಿಕಾರಿಗಳನ್ನುಅರೋಪಿಗಳನ್ನಾಗಿ ಮಾಡಿ ಎಸ್ ಸಿ/ಎಸ್ ಟಿ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವಸತಿ ಶಾಲೆ ಪ್ರಾಂಶುಪಾಲರಾದ ವೀರೇಶ, ಸಿಬ್ಬಂದಿಗಳು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend