ಅಕ್ಷರ ದಾಸೋಹ ಬಿಸಿಊಟ ನೌಕರರ ಬೇಡಿಕೆ ಈಡೇರಿಸಲು ಮನವಿ.
ಸಿಂಧನೂರು.ಜೂಲೈ. 28- ತಾಲೂಕಿನ ಬಿಸಿಯೂಟ ನೌಕರರು ಹಲವಾರು ಸಮಸ್ಯೆಗಳನ್ನಾ ಎದುರಿಸುತ್ತಿದ್ದು ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರು ಬೇಡಿಕೆ ಈಡೇರಿಲ್ಲ ಅಸಮರ್ಪಕ ಪಡಿತರ ವಿತರಣೆ ಸಮಯಕ್ಕೆ ಸರಿಯಾಗಿ ಕಾಂಟಿಜೆನ್ಸಿ,ಗೌರವದನ ನೀಡುತ್ತಿಲ್ಲ ಕೆಲವು ಶಾಲೆಯ ಮುಖ್ಯ ಗುರುಗಳು ಎಸ್ ಡಿ ಎಂ ಸಿ ಅಧ್ಯಕ್ಷರು ತೊಂದರೆ ನೀಡುತ್ತಿದ್ದಾರೆ ಇದರಿಂದ ಅಡುಗೆ ಕೆಲಸಕ್ಕೆ ತೊಂದರೆ ಆಗಿತ್ತಿದ್ದೆ, ಗ್ಯಾಸ್ ಸಿಲಿಂಡರ್ ಹಣ, ಮಕ್ಕಳ ಸಂಖ್ಯೆ ಆದರಿಸಿ ಪೈಸೆ ಆಧಾರದಲ್ಲಿ ಪಡೆಯಬೇಕು, ಪ್ರತಿ ತಿಂಗಳು ರೇಶನ್ ಸರಿಯದ ಪ್ರಮಾಣದಲ್ಲಿ ವಿತರಣೆ ಮಾಡಬೇಕು. ಕೆಲವು ಶಾಲೆಗಳಲ್ಲಿ ಮುಖ್ಯ ಗುರುಗಳೇ ತರಕಾರಿ ಮೋಟೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಅದನ್ನು ಮುಖ್ಯ ಅಡುಗೆಯವರಿಗೆ ನೀಡಬೇಕು, 60ವರ್ಷ ವಯಮಿತಿ ನಿವೃತ್ತಿ ಗೊಳಿಸಿದವರಿಗೆ 1 ಲಕ್ಷ ರೂಪಾಯಿ ಇಡಗಂಟು, ನಿವೃತ್ತ ಪಿಂಚಣಿ ಕುಟುಂಬದ ಸದ್ಯಸರಿಗೆ ಅದೇ ಉದೋಗದಲ್ಲಿ ನೇಮಿಸಿ ಕೊಳ್ಳಬೇಕು ಎಂದು ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಪಂಚಾಯತ್ ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ದೇವಿ ರವರಿಗೆ ಅಕ್ಷರ ದಾಸೋಹ ಬಿಸಿ ಊಟ ನೌಕರರ ಸಂಘ (ಸಿ ಐ ಟಿ ಯು )ತಾಲೂಕು ಸಮಿತಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶೇಕ್ಷಾಖಾದ್ರಿ ರೇಣುಕಮ್ಮ, ವಿಶಾಲಾಕ್ಷಮ್ಮ, ಶರಣಮ್ಮ ಪಾಟೀಲ್, ವಾಣಿ ಎಸ್ ಖಾದ್ರಿ, ಶರಣಮ್ಮ. ಜಿ ರೆಣುಕಮ್ಮ ಕಣ್ಣೂರ. ದೇವಮ್ಮ ,ಸಿದ್ದಮ್ಮ ,ಶಾರದ ಸೇರಿದಂತೆ ಇತರರು ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030