ಅಮೃತ ಮಹೋತ್ಸವಕ್ಕೆ ಜಿಲ್ಲೆಯಿಂದ 20 ಸಾವಿರ ಕಾರ್ಯಕರ್ತರು ಬಾಗಿ – ಬಾದರ್ಲಿ…!!!

Listen to this article

ಅಮೃತ ಮಹೋತ್ಸವಕ್ಕೆ ಜಿಲ್ಲೆಯಿಂದ 20 ಸಾವಿರ ಕಾರ್ಯಕರ್ತರು ಬಾಗಿ – ಬಾದರ್ಲಿ.

ಸಿಂಧನೂರು : ಜುಲೈ 23.ಡಾವಣಗೆರೆಯಲ್ಲಿ ಅಗಸ್ಟ್ 3 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ 20 ಸಾವಿರ ಕಾಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಭಾಗವಹಿಸಿಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ಹಿರಿಯ ಮುಖಂಡರು ಸಿದ್ದರಾಮಯ್ಯ ನವರ ಜನ್ಮ ದಿನಾಚರಣೆ ಮಾಡಲು ಪ್ರಸ್ತಾಪ ಮಾಡಿದಾಗ ಇದಕ್ಕೆ ಒಪ್ಪದ ಸಿದ್ದರಾಮಯ್ಯನವರು ಬೇಡ ಎಂದರು.ಆಗ ಪಕ್ಷದ ಮುಖಂಡರೆಲ್ಲರು ಸೇರಿ ಒತ್ತಡ ಹಾಕಿ ಸ್ವಾಗತ ಸಮಿತಿ ರಚನೆ ಮಾಡಿ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಮಾಡ ಲಾಗುತ್ತಿದ್ದು ರಾಜ್ಯದ 224 ವಿಧಾನ ಸಭಾ ಕ್ಷೇತ್ರದಿಂದ ಕಾರ್ಯಕರ್ತರು ಸೇರಿದಂತೆ ಒಟ್ಟು 4 ಲಕ್ಷ ಜನ ಮೇಲ್ಪಟ್ಟು ಸೇರುವ ನಿರೀಕ್ಷೆ ಇದ್ದು ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಕಾರ್ಯಕ್ರಮಕ್ಕೆ ಬರಲು 5 ಬಸ್ ಗಳನ್ನು ಸಮಿತಿಯಿಂದ ಬಿಡಲಾಗಿದೆ. ಅಲ್ಲದೆ ಕಾರ್ಯಕ್ರಮ ಕ್ಕೆ ಬಂದವರಿಗೂ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ.ಕಾಳಿಂಗಪ್ಪ ವಕೀಲರು, ಮಲ್ಲಿಕಾರ್ಜುನ ಪಾಟೀಲ್, ಮೂರ್ತಜಾ ಹುಸೇನ್ ಆರ್.ತಿಮ್ಮಯ್ಯ ನಾಯಕ, ಖಾಜಿ ಮಲಿಕ್, ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡರು, ನಿರುಪಾದೆಪ್ಪ ವಕೀಲರು, ಜಾಫರ್ ಜಾಗೀರದಾರ, ಲಿಂಗಪ್ಪ ದಡೆಸೂಗೂರು, ಡಾ. ನಾಗವೇಣಿ, ದ್ರಾಕ್ಷಾಯಿಣಿ, ಸೇರಿದಂತೆ ಇತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend