ಬೇಡ ಜಂಗಮ ಪ್ರಮಾಣ ಪತ್ರ ಜಂಗಮ ಸಮಾಜದಿಂದ ಬೃಹತ್ ಪ್ರತಿಭಟನೆ.
ಸಿಂಧನೂರ ಜುಲೈ 11. ನಮಗೆ ಬೇಡ ಜಂಗಮ ಪ್ರಮಾಪತ್ರ ಕೊಡಬೇಕೆಂದು ಅಗ್ರಹಿಸಿ ನಗರದಲ್ಲಿ ಜಂಗಮ ಸಮಾಜದಿಂದ ದೊಡ್ಡ ಮಟ್ಟದ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಆದಿಶೇಷ ಗುಡಿಯಿಂದ ಹೊರಟ ಫ್ರತಿಭಟನೆ ಮೆರವಣಿಗೆ ನಗರದ ಪ್ರಮುಖ ವ್ರತ ಗಳಲ್ಲಿ ಸಂಚರಿಸಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಾಗೂ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನೆ ಕಾರರು ಬೇಡ ಜಂಗಮ ಪ್ರಮಾಣ ಪತ್ರ ಕೊಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಸಮಾಜದ ಮುಖಂಡರು ಹಾಗು ಹರ.ಗುರು ಚರ ಮೂರ್ತಿ ಗಳನ್ನು ಸರ್ಕಾರ ಅವಮಾನ ಮಾಡಿದ್ದನ್ನು ಜಂಗಮ ಸಮಾಜ ಉಗ್ರವಾಗಿ ಖಂಡಿಸಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸಮಾಜದ ಮುಖಂಡರು ಬಿಜೆಪಿ ಪಕ್ಷ ಹಾಗೂ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.
ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ ಪ್ರತಿಮೆಗಳಿಗೆ ಮಾಲಾರ್ಪಣ ಮಾಡಿ ಅಂಬೇಡ್ಕರ ಬರೆದಿರುವ ಸಂವಿಧಾನಂತೆ ನಮಗೂ ಸೌಲಭ್ಯ ಸಿಗಬೇಕು ಇಲ್ಲದಿದ್ದರೆ ಸಂವಿಧಾನಕ್ಕೆ ಹಾಗೂ ಅಂಬೇಡ್ಕರ ಗೆ ಮಾಡಿದ ಅವಮಾನ ರಾಜಕಾರಣಿಗಳಿಗೆ ನಮ್ಮ ಮತ ಬೇಕು ಆದರೆ ನಮಗೆ ಮೀಸಲಾತಿ ನೀಡಲು ಮೀನಾಮೇಶ ಯಾಕೆ ಎಣಿಸುತ್ತಿರಿ ಎಂದು ವಿವಿಧ ಪಕ್ಷಗಳ ಮುಖಂಡರನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯರು, ಸಮಾಜದ ಮುಖಂಡರಾದ ರವಿ ಹಿರೇಮಠ, ರಾಜೇಶ ಹಿರೇಮಠ, ವಿರೇಶ ಯಡಿಯೂರಮಠ, ಹಂಪಯ್ಯ ರಾವಿಹಾಳ, ಪ್ರಭುರಾಜ, ಡಾ.ಪತ್ರಯ್ಯಸ್ವಾಮಿ,ಚನ್ನಬಸಯ್ಯ ಹರಟೆನೂರ, ಶರಣಯ್ಯ ಸ್ವಾಮಿ, ಅಮರಯ್ಯ ಸ್ವಾಮಿ ಅಲಬನೂರ, ಮಲ್ಲಯ್ಯ ವಕೀಲರು,ಸಿ.ಬಿ ಸ್ವಾಮಿ, ಸುನಂದ,ಶೀಲಾ, ಶಾರದಾ, ಗೀತಾ,ಮಂಗಳ, ಮಲ್ಲಿಕಾರ್ಜುನ, ರಾಜಶೇಖರ, ನಾಗರಾಜ ಕಂಡಿಮಠ ಚನ್ನಬಸಪ್ಪ ಕಂಡಿಮಠ, ಸಿದ್ದಯ್ಯ ಹಿರೇಮಠ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030