ಸಿಂಧನೂರು :ಛಲವಾದಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ…!!!

Listen to this article

ಸಿಂಧನೂರು :ಛಲವಾದಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ.

ಛಲುವಾದಿ ಮಹಾಸಭಾ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಮನವಿ ಮಾಡಿದರು. ಸುಮಾರು ವರ್ಷಗಳಿಂದ ತಮ್ಮ ಬಿಜೆಪಿ ಪಕ್ಷದಲ್ಲಿ ಛಲವಾದಿ ಸಮಾಜದವರು ಪಕ್ಷದಲ್ಲಿದ್ದಾರೆ ಹಾಗೂ ಸುಮಾರು 6 ರಿಂದ 7 ಜನ ಶಾಸಕರು ಕೂಡ ಇದ್ದಾರೆ,ಛಲವಾದಿ ಸಮುದಾಯಕ್ಕೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡದೆ ಛಲುವಾದಿ ಸಮುದಾಯಕ್ಕೆ ವಂಚನೆ ಮಾಡಿದೆ.ರಾಜ್ಯಾದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಶಾಸಕರು,ಸಂಸದರು ಆಯ್ಕೆಯಾಗಲು ಸಮುದಾಯ ಸಹಕಾರಿಯಾಗಿದೆ ಕಳೆದ ಬಾರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಛಲವಾದಿ ಸಮುದಾಯದ ಯಾರೊಬ್ಬರಿಗೋ ಸಚಿವ ಸ್ಥಾನ ನೀಡದೆ ಛಲವಾದಿ ಸಮುದಾಯದಯವನ್ನ ನಿರ್ಲಕ್ಷಿಸಿರುವುದು ನೋವುಂಟು ತಂದಿದೆ ಆದರೆ ಈ ಬಾರಿಯು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರ ಸಂಪುಟದಲ್ಲಿ ಛಲವಾದಿ ಸಮುದಾಯದಿಂದ ಆಯ್ಕೆ ಯಾಗಿರುವ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಶರಣಬಸವ ಮಲ್ಲಾಪೂರ ಛಲವಾದಿ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಡಾ.ರಾಮಣ್ಣ ಗೊನ್ವಾರ್, ಹಾಗೂ ಸಮಾಜದ ಹಿರಿಯರಾದ ಬಸವರಾಜ್ ಕುನ್ನಟಗಿ,ನರಸಪ್ಪ ಕಟ್ಟಿಮನಿ, ಹನುಮಂತಪ್ಪ ಬೂದಿವಾಳ ವಕೀಲರು, ಅಯ್ಯಪ್ಪ ಮಲ್ಲಾಪೂರ ವಕೀಲರು, ಹನುಮಂತಪ್ಪ ಗೋಮರ್ಸಿ, ವಿರುಪಣ್ಣ ಬೂದಿಹಾಳ್, ನಿರುಪಾದಿ ಸಾಸಲಮರಿ, ಶಿವಪುತ್ರ ಪಗಡದಿನ್ನಿ, ವೀರೇಶ್ ಕುನ್ನಟಗಿ, ವೀರೇಶ್ ಬೂದಿವಾಳ ಕ್ಯಾಂಪ್, ಮುದುಕಪ್ಪ ಮಲ್ಲಾಪುರ, ಅಂಬಣ್ಣ ಮಲ್ಲಾಪುರ ಹಾಗೂ ಛಲವಾದಿ ಹಿರಿಯರು ಯುವಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend