ಸಿಂಧನೂರು : ಬಹುಜನ ಸಮಾಜ ಪಾರ್ಟಿ ವತಿಯಿಂದ ದಲಿತ ಸಮುದಾಯದ ಕುಂದು ಕೊರತೆ ಸಭೆಯನ್ನು ಕರೆಯಲು ಮನವಿ.
ಸಿಂಧನೂರು ತಾಲೂಕಿಗೆ ನೂತನ ಸಿ.ಪಿ.ಐ.ಯಾಗಿ ಆಗಮಿಸಿದ ಉಮೇಶ ಕಾಂಬ್ಳೆ ಇವರಿಗೆ ಬಿಎಸ್ಪಿ ಸಂಸ್ಥಾಪಕರ ಕಾನ್ಸಿರಾಮ್ ಫೋಟೋ ನೀಡಿ ಸನ್ಮಾನ ಮಾಡಲಾಯಿತು. ಇದೆ ಸಂದರ್ಭದಲ್ಲಿ ದಲಿತರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ತಾಲೂಕಿನಲ್ಲಿ ಹೆಚ್ಚಾಗಿದ್ದು,ಪ್ರತಿ ತಿಂಗಳು ದಲಿತ ಸಮುದಾಯದ ಸಭೆಯನ್ನು ಕರೆದು ದಲಿತರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕುವುದು, ಕೆಲವು ಗ್ರಾಮಗಳಲ್ಲಿ ಹೋಟೆಲ್ ಗಳಲ್ಲಿ, ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ, ಎಂದು ನೂತನ ಸಿಪಿಐ ಯವರಿಗೆ ಮನವಿ ಮಾಡಿದರು. ನಗರ ಪೋಲಿಸ್ ಠಾಣೆ ಪಿಎಸ್ಐ ವಿಜಯಕೃಷ್ಣ ಜೊತೆಯಲ್ಲಿದ್ದರು ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಹುಲಗಪ್ಪ ಮಲ್ಕಾಪುರ್, ತಾಲೂಕು ಉಪಾಧ್ಯಕ್ಷರು ನಿಂಗರಾಜ್ ಮಲ್ಲಾಪುರ್, ತಾಲೂಕು ಕಾರ್ಯದರ್ಶಿ ಅಯ್ಯಪ್ಪ ಯದ್ದಲದೊಡ್ಡಿ,ಕನಕಪ್ಪ ನಾಯಕ್ ಬೂತಲದಿನ್ನಿ, ಇನ್ನಿತರರು ಭಾಗವಹಿಸಿದ್ದರು.
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030