ಶಾಲಾ ಪ್ರಾರಂಭೋತ್ಸವಕ್ಕೆ ಜಗದಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಾಕಾರಿ ಚಾಲನೆ.
ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಇಂದು ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಿದ್ದರಿಂದ ಅದರಂತೆ ವಿಶೇಷವಾಗಿ ಜಿಲ್ಲಾ ಪಂಚಾಯತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟ ಇವರ ಸಹಯೋಗದಲ್ಲಿ ಸರ್ಕಾರಿ ಶಾಲೆಗಳು ಜಾಗೃತ ಅಭಿಯಾನ ಮಾಡಿ ಶಾಲೆಗೆ ಬರದ ಮಕ್ಕಳನ್ನು ಕರೆತರಲು
” ಶಾಲೆಯ ಕಡೆ ನನ್ನ ನಡೆ ” ಎಂಬ ಘೋಷ ವಾಕ್ಯದೊಂದಿಗೆ ಗ್ರಾಮದ ಮಕ್ಕಳೊಂದಿಗೆ ಗ್ರಾಮದ ಹಲವು ಬೀದಿಗಳಲ್ಲಿ ಅಭಿಯಾನ ಮಾಡಿದರು ಈ ಅಭಿಯಾನವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಗುದಗೆನ್ನವರ ಚಾಲನೆ ನೀಡಿದರು. ಅಭಿಯಾನದಲ್ಲಿ ಮುಖ್ಯಗುರುಗಳಾದ ಪಿ.ಆರ್.ಮದುರಖಂಡಿ
ಸಹ ಶಿಕ್ಷಕರಾದ ಸಿ.ವಿ.ಕುಲಕರ್ಣಿ, ಎಮ್.ಎಸ್ ಗಾಣಿಗೇರ, ಪಿ.ಆರ್.ತಾಂಬೆ, ಎಮ್.ಎಸ್.ಬಾಬಾನಗರ, ಎಸ್.ಎಸ್.ಬುಗುಟ್ಯಾಗೋಳ, ವಿ.ಬಿ.ಪೂಜಾರ, ಎಸ್.ಎಮ್.ವಾಲಿ, ಎನ್.ಎಸ್.ನಿಂಗನಗೌಡ್ರ, ಎಮ್.ಕೆ.ಹೂಗಾರ, ಡಿ.ಎ.ದಿಲಾವರನಾಯ್ಕ, ಜೆ.ಎಮ್.ಮುಂಡಗನೂರ, ಎಸ್.ಜಿ.ಪವಾರ ಮತ್ತು ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ವರದಿ.
ಬಸವರಾಜ ನಂದೆಪ್ಪನವರ
ಜಗದಾಳ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030