ವಿಲೇವಾರಿಯಾಗದ ಘನ ತ್ಯಾಜ್ಯ ಹತ್ತಾರು ಸಮಸ್ಯೆಗಳ ಉಲ್ಬಣ.
ರಬಕವಿ ಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮ ಹೊರವಲಯದಲ್ಲಿರುವ ರಬಕವಿ ಬನಹಟ್ಟಿ ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕ ಈದಿಗ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದೆ. ಕಸದಿಂದ ರಸ ಎಂಬ ಘೋಷ ವಾಕ್ಯದೊಂದಿಗೆ ದಶಕದ ಹಿಂದೆ ಸ್ಥಾಪಿವಾದ ಘಟಕ ಇದಕ್ಕೆ ನಗರಸಭೆಯಿಂದ ಕೋಟಿ ಕೋಟಿ ಹಣ ಖರ್ಚು ಮಾಡಿ ನಿರ್ಮಾಣ ಮಾಡಿದ್ದಾರೆ ಆದರೆ ಇದರ ನಿರ್ವಹಣೆ ಮಾತ್ರ ಸರಿಯಾದ ರೀತಿಯಲ್ಲಿ ಇಲ್ಲದೆ ಜನಸಾಮಾನ್ಯರಿಗೆ ತಲೆನೋವಾಗಿದೆ.
ಘಟಕಕ್ಕೆ ದಿನನಿತ್ಯ ಹತ್ತಾರು ವಾಹನಗಳ ಮೂಲಕ ಕಸ ತಂದು ಸುರಿದು ಹೋಗುತ್ತಾರೆ ಬೇಜವಾಬ್ದಾರಿಯಿಂದ ಬರುವ ಮಾರ್ಗದಲ್ಲಿ ವಾಹನದಲ್ಲಿನ ಕಸ ರಸ್ತೆಗಳಲ್ಲಿ ಬಿಳ್ಳುವುದು ಸಹ ಹಲವು ಬಾರಿ ಸಾರ್ವಜನಿಕರು ಕಂಡು ಹೇಳುತ್ತಿದ್ದಾರೆ. ಘಟಕದಲ್ಲಿ ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವದರಿಂದ ಹುಳ ಹುಪ್ಪಟೆ ನೋನಗಳ ಕಾಟ ಹೆಚ್ಚಾಗಿ ಅಕ್ಕ ಪಕ್ಕದ ಜನ ಆರೋಗ್ಯ ತಪ್ಪಿ ಅನಾರೋಗಕ್ಕಿಡಾಗುತ್ತಿದ್ದಾರೆ. ತುಂಬಾ ಸಮಸ್ಯೆಯಾಗಿ ಇಂದು ಬಿಗ ಹಾಕಿ ಆಕ್ರೋಶದಿಂದ ಪ್ರತಿಭನೆ ನಡೆಸಿದ ಘಟನೆಯೊಂದು ನಡೆಯಿತು ಒಟ್ಟಿನಲ್ಲಿ ಘಟಕದ ಆಸುಪಾಸಿನ ಜನತೆಗೆ ಬಹಳ ಜ್ವಲಂತ ಸಮಸ್ಯೆಯಾಗಿ ಪರಿಮಿಸಿದೆ.
ವರದಿ.ಬಸವರಾಜ ನಂದೆಪ್ಪನವರ
ಚಿಮ್ಮಡ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030