ಚಿತ್ರದುರ್ಗ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಪ್ರಾಥಮಿಕ ಆರೋಗ್ಯ
ಕೇಂದ್ರದಲ್ಲಿ ಕೊರೊನಾ ನಿರ್ಮೂಲನೆಗೆ ಸಿದ್ಧಪಡಿಸಿದ ಕೋವಿಲ್ಸ್ ಲಸಿಕೆಯನ್ನು ಯಾವುದೇ ಭಯವಿಲ್ಲದೆ ಪಡೆದುಕೊಳ್ಳಿ ಎಂದು ನಾಗಸಮುದ್ರ ಕ್ಷೇತ್ರದ ಜಿಪಂ ಸದಸ್ಯೆ ಹಾಗೂ ಪ್ರಸೂತಿ, ಸ್ತ್ರೀರೋಗ ತಜ್ಞೆ ಡಾ.ಇಂದಿರಾ ರೆಡ್ಡಿ ಸಲಹೆ ನೀಡಿದರು. ನಾಗಸಮುದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕೊರೋನಾ ವಾರಿಯರ್ಸ್ ಲಸಿಕೆ ಪಡೆದು
ಭೀತಿಯಿಂದ ದೂರವಾಗಿ, ಕೋರೋನಾ ಮುಕ್ತ ಜೀವನಕ್ಕೆ ಹೆಜ್ಜೆಯಿರಿಸಬೇಕು. ಆಸ್ಪತ್ರೆ
ಸಿಬ್ಬಂದಿ ನಿರ್ಭೀತಿಯಿಂದ ಲಸಿಕೆ ಪಡೆದು ಸಾರ್ವಜನಿಕರಲ್ಲಿ ಕೊರೊನಾ ಭಯ ಓಡಿಸುವತ್ತ ಕಾರ್ಯೋನ್ಮುಖರಾಗಬೇಕು ಎಂದರು. ವೈದ್ಯಾಧಿಕಾರಿ ಡಾ.ಪಿ.ಎಸ್. ವಿಶ್ವಾಸ್ ಮಾತನಾಡಿ, ಆರೋಗ್ಯ ಕೇಂದ್ರವ್ಯಾಪ್ತಿಯ ಆಸ್ಪತ್ರೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ 49 ಕೋರೋನಾ ವಾರಿಯರ್ಸ್ಗೆ ಲಸಿಕೆ ನೀಡಲಾಯಿತು. ಫಲಾನುಭವಿಗಳಲ್ಲಿ ಸ್ವಲ್ಪ
ಗಾಬರಿ ಬಿಟ್ಟರೆ ಯಾವುದೇ ಸಮಸ್ಯೆಯಾಗಿಲ್ಲ. ಲಸಿಕೆ ಪಡೆಯಲು ಹಿಂಜರಿದವರಿಗೆ ಸರಿಯಾದ ಮಾಹಿತಿ ನೀಡಿದಾಗಲಸಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಗ್ರಾಮದ ಮುಖಂಡರಾದ ನಿಂಗಣ್ಣ, ಸಣ್ಣಮಾರಣ್ಣ, ಆರ್.ಗಂಗಣ್ಣ, ಫಾರಸಿಸ್ಟ್ ಸಿ.ಈಶ್ವರಮ್ಮ, ಎಎನ್ ಎಂ ಶ್ವೇತಾ, ಕಚೇರಿ ಸಿಬ್ಬಂದಿ ದಿವ್ಯ, ಆಶಾಲತಾ, ಡಿ-ದರ್ಜೆ ನೌಕರರಾದ ಬಿ.ಹುಲಿರಾಜ್, ಪಿ.ಪಾಪಣ್ಣ, ಪೊಲೀಸ್ ಕಾನ್ಸ್ಟೆಬಲ್ ಶಿವಣ್ಣ
ಹಾಗೂ ಇತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030