” ಛಿ ದಿಕ್ಕಾರವಿರಲಿ ನಿಮ್ಮ ಈ ಪ್ರಭುತ್ವದ ದೌರ್ಜನ್ಯಕ್ಕೆ ”
“ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲಾ ಹೆಣ್ಣು ತಾ ಸಾಕ್ಷಾತ್ ಕಪಿಲಸಿದ್ದಮಸ್ತು ಚನ್ನಮಲ್ಲಿಕಾರ್ಜುನ” ಎಂದ ನಾಡಲ್ಲಿ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿ ನಾವು ಯಾವ ವ್ಯವಸ್ಥೆಯಲ್ಲಿ ಇದ್ದೇವೆ ಎಂದು ಆತ್ಮ ಸಾಕ್ಷಿ ಕೇಳುತ್ತಿದೆ. 56 ಇಂಛಿನ ದೇಹಕ್ಕೆ ಈ ಹೆಣ್ಣುಮಕ್ಕಳ ಸಾಧನೆಯ ಹಿಂದಿರುವ ನೋವಿನ ದೌರ್ಜ್ಯನ್ಯದ ದಬ್ಬಾಳಿಕೆಯ ಕಿರುಕುಳದ ದ್ವನಿ ಕೇಳದೆ ಹೊಯಿತೆ? “ಹೆಣ್ಣನ್ನು ರಕ್ಷಿಸಿ ಹೆಣ್ಣನ್ನು ಓದಿಸಿ” ಎಂದು ಹೇಳುವ ನಿಮ್ಮದೇ ವ್ಯವಸ್ಥೆಯಲ್ಲಿ ಇರುವ ಬ್ರಿಜ್ ಭೊಶಣ್ ಎಂಬ ಸಂಸದ ಈ ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಮಾಡಿರುವುದಾಗಿ ಕಳೆದ ಅನೇಕ ದಿನಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇಲ್ಲಿ ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರು ಸಾಮಾನ್ಯ ಮಹಿಳೆಯರು ಅಲ್ಲಾ ಅವರೆಲ್ಲ ಈ ದೇಶದ ಗೌರವಕ್ಕಾಗಿ ದೇಶದ ಹೆಮ್ಮೆಗಾಗಿ ಒಲೆಂಪಿಕ್ ಕ್ರೀಡಾಕೂಟದಲ್ಲಿ ಪದಕ ಪಡೆದವರು ಅದರ ಮೂಲಕ ಭಾರತದ ದ್ವಜವನ್ನು ಒಲೆಂಪಿಕ್ ಕ್ರೀಡಾಕೂಟದಲ್ಲಿ ರಾರಾಜಿಸುವಂತೆ ಮಾಡಿದವರು. ಇಂದು ಅವರನ್ನು ನಡೆಸಿಕೊಳ್ಳುತ್ತಿರುವ ಪರಿಸ್ಥಿತಿ ನಮ್ಮ ಹೃದಯವನ್ನು ಒಡೆದಿದೆ .
ತಾವು ವಿಶ್ವದ ಅತ್ಯಂತ ಪ್ರಭಾವಾಶಾಲಿ ನಾಯಕ ಯಾಕೆ ಈ ಹೆಣ್ಣುಮಕ್ಕಳಿಗೆ ನ್ಯಾಯ ವದಗಿಸುವ ಕನಿಷ್ಟ ಪ್ರಭಾವವು ನಿಮ್ಮಲ್ಲಿ ಇಲ್ಲವೆ ? ಪ್ರಭಾವಾಶಾಲಿ ನಾಯಕರೆ ಅಲ್ಲಾ ಅಲ್ಲಾ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರೆ.? ದೊಡ್ಡ ದೊಡ್ಡ ಕಟ್ಟಡಗಳಿಂದ ದೊಡ್ಡ ದೊಡ್ಡ ವೇದಿಕೆಗಳಿಂದ ನಾವು ದೊಡ್ಡವರಾಗುವುದಿಲ್ಲ ನೊವಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ಪುಟ್ಟ ಹೃದಯದಿಂದ ನಾವು ದೊಡ್ಡ ಮನಸ್ಸಿನ ವ್ಯಕ್ತಿಯಾಗಬೆಕೇ ಹೊರತು ಉಘೆ ಉಘೇಗಳಿಂದ ಅಲ್ಲಾ. ಬನ್ನಿ ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಭಕ್ತಗಣಗಳೆ ? ಇದು ಯಾವುದೊ ದಿ ಕೇರಳ ಸ್ಟೋರೀ ಅಲ್ಲಾ, ನಿಮ್ಮದೇ ಹಿಂದೂ ಹೆಣ್ಣುಮಕ್ಕಳ ನ್ಯಾಯದ ರೊಧನ, ಯಾಕೆ ಕಣ್ಣು ಕಿವಿ ಬಾಯಿ ಕೆಲಸ ಮಾಡುತ್ತಿಲ್ಲವೆ ನಿಮಗೆ…..? ಇದೇ ಬ್ರಿಜ್ ಭೊಶಣ ಜಾಗದಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿ ಇದ್ದರೆ ಮಾತ್ರ ನಿಮ್ಮ ಹೋರಾಟವೇ? ನೊಂದ ಮಹಿಳಾ ಕ್ರೀಡಾಪಟುಗಳ ಜೊತೆಗೆ ಈ ದೇಶದ ಅಸಂಖ್ಯಾತ ಕೈಗಳು ಇವೆ.ಅವರ ಹೃದಯದ ಭಾವನೆಗಳ ನೋವುಗಳ ಜೊತೆಗೆ ನಮ್ಮ ಹೃದಯವನ್ನು ಬೆಸೆಯುತ್ತೆವೆ. ನ್ಯಾಯಯುತವಾದ ಹೋರಾಟಕ್ಕೆ, ಲೈಂಗಿಕ ದೌರ್ಜನ್ಯ ಕಿರುಕುಳದ ವಿರುದ್ದದ ಹೋರಾಟದ ಜೊತೆಗೆ ನಾವು ನಿಲ್ಲೆತ್ತೆವೆ. “ನಮ್ಮದು ಬುದ್ದನ ನಾಡು ನಮ್ಮದು ಬಸವ ನಾಡು ನಮ್ಮದು ಭೀಮ ನಾಡು ನಮ್ಮದು ಸಂವಿಧಾನ ನಾಡು” ಖಂಡಿತ ನಾವೂ ಗೆಲ್ಲುತ್ತೆವೆ ದೌರ್ಜನ್ಯ ತಡೆಯುತ್ತೆವೆ . ಜೈ ಭೀಮ್ ಜೈ ಪ್ರಬುದ್ಧ ಭಾರತ.
ಅಕ್ಷತಾ ಕೆ ಸಿ
ಸಾಮಾಜಿಕ ಹೋರಾಟಗಾರ್ತಿ ಹಾವೇರಿ ಜಿಲ್ಲೆ…
ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030