ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬಾಲ್ಯದಲ್ಲಿ ನೀಡುವ ಎಲ್ಲಾ ಲಸಿಕೆಗಳನ್ನು ತಪ್ಪದೆ ಹಾಕಿಸಿ ಡಾ.ಅನಿಲಕುಮಾರ…!!!

Listen to this article

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬಾಲ್ಯದಲ್ಲಿ ನೀಡುವ ಎಲ್ಲಾ ಲಸಿಕೆಗಳನ್ನು ತಪ್ಪದೆ ಹಾಕಿಸಿ ಡಾ.ಅನಿಲಕುಮಾರ
ಬಳ್ಳಾರಿ,:
ಮಕ್ಕಳ ಬಾಲ್ಯದಲ್ಲಿ ಮಾರಕವಾಗುವ ಖಾಯಿಲೆಗಳನ್ನು ತಡೆಗಟ್ಟಲು ಸಕಾಲದಲ್ಲಿ ಲಸಿಕೆಗಳನ್ನು ಹಾಕಿಸುವ ಮೂಲಕ ಮಗುವಿನ ಉಜ್ವಲ ಭವಿಷ್ಯಕ್ಕೆ ಹಾಗೂ ಕಾಳಜಿಗಾಗಿ ಎಲ್ಲರೂ ಕೈಜೋಡಿಸಿ ಎಂದು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಆರ್.ಅನಿಲಕುಮಾರ್ ಅವರು ವಿನಂತಿಸಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ಜಿಲ್ಲೆಯಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಡಿ ಪ್ರತಿ ಗುರುವಾರ ಲಸಿಕೆಗಳನ್ನು ಹಾಕಲಾಗುವ ಹಿನ್ನೆಲೆಯಲ್ಲಿ ನಗರದ ಗುಗ್ಗರ ಹಟ್ಟಿ ವ್ಯಾಪ್ತಿಯ ಕಾರ್ಕಲತೋಟ ಬಡಾವಣೆಯಲ್ಲಿ ಲಸಿಕೆ ಪಡೆದ ಮತ್ತು ಲಸಿಕೆಗಳ ಕುರಿತು ನಿರ್ಲಕ್ಷ್ಯ ತೋರುವ ಪಾಲಕರ ಮನೆಗಳ ಭೇಟಿ ಕೈಗೊಂಡ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.


ಬಾಲ್ಯದಲ್ಲಿ ಬರುವ ಮಾರಕ ಖಾಯಿಲೆ ತಡೆಗಟ್ಟಲು ಮಗುವಿನ ವಯಸ್ಸು ಒಂದು ವರ್ಷ ತುಂಬುವುದರೊಳಗೆ 12 ಮಾರಕ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹುಟ್ಟಿದ ತಕ್ಷಣದಿಂದ ಮೊದಲುಗೊಂಡು ವಿವಿಧ ತಿಂಗಳುಗಳಲ್ಲಿ ಮಾರ್ಗಸೂಚಿಯನ್ವಯ ನೀಡುವ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು ಎಂದರು. ಮುಖ್ಯವಾಗಿ ಪೆÇೀಲಿಯೋ, ಬಾಲಕ್ಷಯ, ಕಾಮಾಲೆ, ಧನುರ್ವಾಯು, ಗಂಟಲು ಮಾರಿ, ನಾಯಿಕೆಮ್ಮು, ಹೆಚ್ ಇನ್‍ಫ್ಲೂಯೆಂಜಾ-ಬಿ ನಿಮೋಕಾಕಲ್ ಕಾಯಿಲೆ, ರೋಟ ವೈರಸ್ ಅತಿಸಾರಬೇಧಿ, ಮೆದುಳು ಜ್ವರ, ದಡಾರ-ರೂಬೆಲ್ಲಾ ಖಾಯಿಲೆಗಳ ತಡೆಗೆ ಲಸಿಕೆ ಹಾಗೂ ಸಂಜೆ ಇರುಳುಗಣ್ಣು ತಡೆಯಲು ಎ-ಅನ್ನಾಂಗ ದ್ರಾವಣವನ್ನು ಹಾಕಲಾಗುವುದು. ಎಲ್ಲ ಲಸಿಕೆಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಡಾ.ಅನಿಲ್‍ಕುಮಾರ್ ವಿನಂತಿಸಿದರು.
ಈ ಸಂದರ್ಭದಲ್ಲಿ ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೇಗುಪ್ತಾ ಶಾಯಿನ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಯಶೋಧಮ್ಮ, ಪಿಹೆಚ್‍ಸಿಓ ಉಮಾಮಹೇಶ್ವರಿ, ಆಶಾ ಕಾರ್ಯಕರ್ತೆ ನಾಗಲಕ್ಷ್ಮಿ ಸೇರಿದಂತೆ ತಾಯಂದಿರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್. ಎಚ್. ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend