ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ಜಿಗೇನಹಳ್ಳಿ:ಕೆರೆಗೆ ಜಾರಿ ವಿದ್ಯಾರ್ಥಿ ಸಾವು*<->ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಹಾಗೂ ಗುಡೇಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜಿಗೇನಹಳ್ಳಿ ಗ್ರಾಮದಲ್ಲಿ, ಶಾಲೆಗೆ ತೆರಳಿದ್ದ ವಿದ್ಯಾರ್ಥಿ ಬರ್ಹಿದೆಸೆಗೆಂದು ತೆರಳಿದ್ದಾನೆ. ಮುಗಿಸಿಕೊಂಡು ಕೆರೆಗೆ ಹೋಗಿದ್ದ ಬಾಲಕ ಕಾಲುಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ಜರುಗಿದೆ,ಮೃತ ಬಾಲಕ ಜಿಗೇನಹಳ್ಳಿ ವಿದ್ಯಾರ್ಥಿ ತೇಜ(9)ಎಂದು ಗುರುತಿಸಲಾಗಿದೆ.ಬಾಲಕ ಪತ್ತೆಯಾಗದ್ದನ್ನು ತಡವಾಗಿ ಗಮನಿಸಿದ್ದು,ಬಾಲಕನ ಸ್ನೇಹಿತನು ನೀಡಿದ ಸುಳಿವಿನ ಆಧಾರದ ಮೇಲೆ ಪರಿಶೀಲಿಸಲಾಗಿದೆ.ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ ಎನ್ನಲಾಗಿದೆ, ಮೃತ ಬಾಲಕನ ತಂದೆ ಹೊನ್ನೂರಸ್ವಾಮಿ ಹೇಳಿಕೆ ನೀಡಿದ್ದಾರೆ.ಮೃತ ಬಾಲಕನ ತಂದೆ ನೀಡಿದ ದೂರಿನನ್ವಯ, ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030