ಚಿತ್ರದುರ್ಗ: ನಾಯಕನಹಟ್ಟಿ: ಕೊರೊನಾ ಕರ್ಪ್ಯೂ ಉಲ್ಲಂಘಿಸಿದವರ ಬೈಕ್ಗಳನ್ನು
ಪೊಲೀಸರು ವಶಕ್ಕೆ ಪಡೆದಿರುವುದು. ಬೈಕ್ನಲ್ಲಿ ಬಂದಿದ್ದ ಯುವಕರ ಬೈಕ್ಗಳನ್ನು ವಶಕ್ಕೆ ಪಡೆಯಲಾಯಿತು. ಎರಡು ಕಾರು ಹಾಗೂ 25ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ತರಲಾಯಿತು. * ವಾರಾಂತ್ಯ ಕರ್ಪ್ಯೂ ಭಾನುವಾರ ಪಟ್ಟಣದಲ್ಲಿ ಯಶಸ್ವಿಯಾಯಿತು. ಪಿಎಸ್ಐ ಮಹೇಶ್ ಹೊಸಪೇಟೆ ಹಾಗೂ ಸಿಬ್ಬಂದಿ ಬೆಳಿಗ್ಗೆ ಆರು ಗಂಟೆಗೆ ರಸ್ತೆಗಿಳಿದಿದ್ದರು. ಪ್ರತಿ ದಿನದಂತೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಅವಕಾಶ ಇದೆ ಎಂದು ಭಾವಿಸಿ ಜನರು ರಸ್ತೆಗಿಳಿದಿದ್ದರು. ಅಂತಹ ಜನರಿಗೆ ತಿಳಿ ಹೇಳಿ ವಾಪಸ್ ಕಳುಹಿಸಲಾಯಿತು. ಬೆಳಗ್ಗೆ ವ್ಯಾಪಾರಕ್ಕೆ ಬಂದಿದ್ದ ಜನರಿಗೆ ಕರ್ಪ್ಯೂ ಹಾಗೂ ಜಿಲ್ಲಾಧಿಕಾರಿಗಳ ಆದೇಶವನ್ನು ತಿಳಿಸಲಾಯಿತು. ತೇರು ಬೀದಿ, ಪಾದಗಟ್ಟೆ ಕೋಟೆ ಬ್ಲಾಕ್ ಸೇರಿದಂತೆ ಸೈರನ್ ಹೊತ್ತು ಪೊಲೀಸ್ ಜೀಪ್ ಸಂಚರಿಸಿ ಜನರಿಗೆ ಎಚ್ಚರಿಕೆ ನೀಡಲಾಯಿತು. ನಿಂಬೆಹಣ್ಣು, ಕೊತ್ತಂಬರಿ, ಎಣ್ಣೆ ಸೇರಿದಂತೆ ನಾನಾ ಕಾರಣಗಳನ್ನು ಹೇಳಿ…
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030