ಮತದಾನ ನಮ್ಮ ಸಂವಿಧಾನ ಹಕ್ಕು -ಬಸವರಾಜ್ ಹೆಗ್ಗನಾಯಕ್
ಧಾರವಾಡ : ಮತದಾನ ನಮ್ಮ ಸಂವಿಧಾನ ಹಕ್ಕು. ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಬಸವರಾಜ್ ಹೆಗ್ಗನಾಯಕ್ ಹೇಳಿದರು.
ಜಿಲ್ಲಾ ಸ್ವೀಪ ಸಮಿತಿ, ಅಂಜುಮನ್ ಪದವಿ ಮಹಾವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್, ಸನ್ನಿಧಿ ಮಹಿಳಾ ಮಂಡಳ, ರೈನ್ಸ್ ಕ್ಲಬ್ ಧಾರವಾಡ, ಗ್ಯಾಲಕ್ಸಿ ಮತ್ತು ಎಂ.ಎಂ. ಜೋಶಿ ನೇತ್ರ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿ ಮತ್ತು ಮತದಾನದ ಮಹತ್ವ ಬಗ್ಗೆ ಅರಿವು ಮೂಡಿಸಿ, ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ಪ್ರಭುಗಳಾಗಿದ್ದು, ಸಕ್ರಿಯವಾಗಿ ಸೂಕ್ತ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಂದಾ ಗುಳೇದಗುಡ್ಡ, ಡಾಕ್ಟರ್ ಎಸ್.ವೈ.ಸರಗಿರೋ, ಕೈರುದ್ದೀನ್ ಶೇಖ, ಅಬ್ದುಲ್ ಅಜಿತ್ ಬಡಬಡೆ, ಡಾಕ್ಟರ್ ಮುಕಾಂತರ, ಡಾಕ್ಟರ್ ನಾಗರಾಜ್ ಗುದಗನವರ, ಡಾ.ಎಸ್.ವೈ.ಶೇಖ್, ಗಿರೀಶ್ ಸಾಲುಂಕೆ, ಸನ್ನಿಧಿ ಮಹಿಳಾ ಮಂಡಲ ಸದಸ್ಯರು, ಲಯನ್ಸ್ ಕ್ಲಬ್ ಧಾರವಾಡ ಗ್ಯಾಲಕ್ಸಿ ಸದಸ್ಯರು, ಅಂಜುಮನ್ ಪದವಿ ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ಇತರರು ಭಾಗವಹಿಸಿದ್ದರು….
ವರದಿ. ಬಸವರಾಜ್ ಧಾರವಾಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030