ಚಳ್ಳಕೆರೆಯ ಬಾ, ಜ, ಪ, ನಾಯಕರ ಸಮುದಾಯ ಸಭೆ…!!!

Listen to this article

ಇಂದು ಚಳ್ಳಕೆರೆ ನಗರದಲ್ಲಿ ಆಯೋಜಿಸಿದ್ದ ‘ಭಾ ಜ ಪ’ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಸಮುದಾಯದವರನ್ನು ಪರಿಗಣನೆ ಮಾಡಿ, ವಿಶ್ವಾಸ ಗಳಿಸಿ ಚುನಾವಣೆಯನ್ನು ಜೊತೆಯಾಗಿ ಎದುರಿಸಬೇಕೆಂದು ಎಂದು ಆಗ್ರಹಿಸಲಾಯಿತು. ಈ ಹಿಂದೆ ಆದ ತಪ್ಪುಗಳನ್ನು ಸರಿಪಡಿಸಿಕೊಂಡು, ಪಕ್ಷ ಕಟ್ಟಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದಲ್ಲಿ ಮುಂದಿನ ಹೋರಾಟಕ್ಕೆ ಸಿದ್ದರಿದ್ದೇವೆ ಎಂಬ ಒಕ್ಕೊರಲಿನ ಅಭಿಪ್ರಾಯವನ್ನು ಕಾರ್ಯಕರ್ತರು ನಮಗೆ ತಿಳಿಸಿದರು.
ನಮ್ಮ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಿ,ಹಿರಿಯ ಮುಖಂಡರಾದ ಮತ್ತು ಮಾಜಿ ಶಾಸಕರು ಆದ ತಿಪ್ಪೇಸ್ವಾಮಿ ಹಾಗೂ ಕ್ಷೇತ್ರದ ನಾಯಕರಾದ ಅನಿಲ್_ಕುಮಾರ್ ಅವರಿಗೆ ತಿಳಿಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ಎಸ್.ಟಿ.ಮೋರ್ಚಾ ರಾಜ್ಯ ಉಪಾಧ್ಯಕ್ಷರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮುಖಂಡರು ಆದ ಅನಿಲ್_ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ರಾಮದಾಸಣ್ಣ, ಮುಖಂಡರಾದ ಜಯರಾಮಣ್ಣ, ಬಾಲರಾಜಣ್ಣ,ನಗರಸಭೆ ಸದಸ್ಯರಾದ ಜಯಣ್ಣ, ಪಾಲಮ್ಮ, ವೆಂಕಟೇಶ್, ದೂರೆ ಬೈಯಣ್ಣ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರು ಡಾ||ಮಂಜುನಾಥ ಹಾಗೂ ಮುಖಂಡರಾದ ಜೆ.ಕೆ.ತಿಪ್ಪೇಶ್
ದೊರೆ ನಾಗರಾಜ , ಮುದ್ದಾಪುರ ಮಂಜಣ್ಣ, ಜಗದೀಶ್, ಬೊಮ್ಮಣ್ಣ,ಹರವಿಗೂಂಡನಹಳ್ಳಿ ರಾಜಣ್ಣ,ತುರುವನೂರು ರಮೇಶ್, ಚಿನ್ನಯ್ಯ ಮತ್ತು ನೂರಾರು ನಾಯಕ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend