ಅಧಿಕಾರಿ
(ಗ್ರೇಡ್-1 ಕಾರ್ಯದರ್ಶಿ) ಇವರನ್ನು ಮೂಲ ಸ್ಥಳಕ್ಕೆ ಹಿಂದಿರುಗಿಸುವಂತೆ ಗ್ರಾಪಂ ಸದಸ್ಯರು ತಾಪಂ ಸಿಇಒ ಗೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ದೂರು ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಪಂ ಗ್ರೇಡ್ 1 ಕಾರ್ಯದರ್ಶಿ ಡಿ.ಕೆ
ರಜನಿಕಾಂತ್ ಇವರಿಗೆ ಕಾಲುವೆಹಳ್ಳಿ ಹಾಗೂ ಗ ಓಬಳಾಪುರ ಗ್ರಾಪಂ ಎರಡು ಗ್ರಾಪಂ ಪಿಡಿಒ ಹುದ್ದೆ ಮಾಡುವುದರಿಂದ ಕಾಲುವೆಹಳ್ಳಿ ಗ್ರಾಪಂ ಕಚೇರಿಗೆ ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ ನರೇಗಾ. 15 ನೇ ಹಣ ಕಾಸು ಯೋಜನೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತಿವೆ. ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂಧನೆ ಇಲ್ಲ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ
ನಡುವೆ ಅಭಿವೃದ್ಧಿ ಅಧಿಕಾರಿಯ ಹೊಂದಾಣಿಕೆ ಇಲ್ಲದಿರುವುದು ಹಾಗೂ ಅಭಿವೃದ್ಧಿಯ ಕೆಲಸ ಕಾರ್ಯಗಳಿಗೆ ಸೂಕ್ತ
ರೀತಿಯಾಗಿ ಸ್ಪಂದಿಸುವುದಿಲ್ಲ. ಬೆಜಾವಬ್ದಾರಿಯ ನಡತೆಯನ್ನು
ತೊರಿಸುತ್ತಾರೆ, ಅಭಿವೃದ್ಧಿ ಅಧಿಕಾರಿಯ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಭಾವಿಗಳ
ಕೈಗೊಂಬೆಯಾಗಿ ನಡೆದುಕೊಳ್ಳುತ್ತಾರೆ. ಈಗಾಗಲೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಂದತೊರಿಸುತ್ತಾರೆ, ಅಭಿವೃದ್ಧಿ ಅಧಿಕಾರಿಯ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಭಾವಿಗಳ
ಕೈಗೊಂಬೆಯಾಗಿ ನಡೆದುಕೊಳ್ಳುತ್ತಾರೆ. ಈಗಾಗಲೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿಗಳಿಂದ
ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಿ ಆದೇಶ ನಿಡಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ರಜನಿಕಾಂತ್ ಡಿ.ಕೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾಲ್ಲೂಕು ಪಂಚಾಯತಿ ಆದೇಶದ ಪ್ರಕಾರ ಮೂಲ ಗ್ರಾಮ ಪಂಚಾಯತಿಗೆ ಸಾಣೀಕೆರೆ ಗ್ರಾಮಪಂಚಾತಿಗೆ
ವರ್ಗಾವಣೆಗೊಳಿಸಿ ಆದೇಶಿಸಬೇಕು ನಮಗೆ ಬೇರೆ ಪಿಡಿಒ ನೇಮಕಾತಿ ಮಾಡುವಂತೆ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ತಾಪಂ ಇಒ ಲಕ್ಷ್ಮಣ್ ಮಾತಾಡಿ ಪಿಡಿಒ ಗಳ ಬದಲಾವಣೆ ಮಾಡುವ ಅಧಿಕಾರ ನಮ್ಮವ್ಯಾಪ್ತಿಯಲ್ಲಿ ಇಲ್ಲ ಎಲ್ಲಾ ಪಂಚಾಯಿತಿ ಯವರು ಪಿಡಿಒ ಅವರು ಬೇಡ ಇವರು ಬೇಡ ಎಂದರೆ ಹೇಗೆ ಇರುವ ವ್ಯವಸ್ಥೆಯಲ್ಲಿ ಸರಿಪಡಿಸಿಕೊಳ್ಳಬೇಕು ನಿಮ್ಮ ಸಮಸ್ಯೆಗಳೇನಾದರೂ ಇದ್ದರೆ ನಮ್ಮ ಬಳಿ ಹೇಳಿಮಾಡಿಸಿಕೊಳ್ಳಲಾಗುವುದು ಎಂದು ಸದಸ್ಯರಿಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿದರು…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030