ಚಳಕೆರೆ ತಾಲ್ಲೂಕು ವರವೂ ಗ್ರಾಮದ ಸರ್ವೇ ನಂಬರ್ ೧೬ರಲ್ಲಿ ಒತ್ತುವರಿಯಾಗಿದ್ದ ನಾಲ್ಕು ಎಕರೆ ಜಮೀನನ್ನು ಚಳ್ಳಕೆರೆ ತಹಸೀಲ್ದಾರ್ ಎನ್.ರಘುಮೂರ್ತಿಯವರು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಸರ್ವೆ ನಂಬರ್ 16ರಲ್ಲಿ ಒಟ್ಟು 67 ಎಕರೆ ಸರ್ಕಾರಿ ಜಮೀನಿದ್ದು ಈ ಜಮೀನಿನ ಬಾಜುನಲ್ಲಿ ಶೆಹ್ರಾಬಾನು ಮತ್ತು ಇತರೆ ಅವರಿಗೆ ತಲಾ ನಾಲ್ಕು ಎಕರೆ ಅಂತ ಇಡುವಳಿ ಜಮೀನಿದ್ದು ಈ ಜಮೀನಿಗೆ ಹೊಂದಿಕೊಂಡಂತಿರುವ ಮೇಲ್ಕಂಡ ಸರ್ಕಾರಿ ಸರ್ವೇ ನಂಬರ್ ನಲ್ಲಿನ ಮೂರು ಎಕರೆ ಮೂವತ್ತು ಗುಂಟೆ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಹಂತಿ ಕಂಬ ನಿರ್ಮಿಸಿದ್ದು ಗ್ರಾಮದ ಜನಜಾನುವಾರುಗಳಿಗೆ ಗ್ರಾಮದ ಉಪಯೋಗಕ್ಕೆ ಜಮೀನಿಲ್ಲವೆಂದು ಎನ್ ದೇವರಾಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಾ. ಕಾಟಮ್ ಲಿಂಗಯ್ಯ ಇವರು ತಾಶಿಲ್ದಾರ್ ವರಲ್ಲಿ ಮನವಿ ಮಾಡಿದ್ದು ಇವರ ಮನವಿಗೆ ಸ್ಪಂದಿಸಿದ ತಹಶೀಲ್ದಾರ ಎನ್ ರಘುಮೂರ್ತಿ ಇಂದು ಬೆಳಿಗ್ಗೆ ಸರ್ವೆಯವರು ಮತ್ತು ಕಂದಾಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಜಮೀನಿನ ಅಳತೆ ಕಾರ್ಯ ಪೂರೈಸಿ ಒತ್ತುವರಿ ಖಚಿತಪಟ್ಟಿದ್ದರಿಂದ ತಕ್ಷಣವೇ ಜೆಸಿಬಿಯಿಂದ ಟ್ರೆಂಚ್ ಹೊಡಿಸಿ ಸರ್ಕಾರದ ಸುಪರ್ದಿಗೆ ಪಡೆದರು..
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030