ರಾಮನಾಯ್ಕ ಡಿ, ಬಳ್ಳಾರಿ ವಿವಿಯಿಂದ ಪಿ.ಎಚ್.ಡಿ ಪದವಿ ಪ್ರಧಾನ…!!!

Listen to this article

ರಾಮನಾಯ್ಕ ಡಿ, ಬಳ್ಳಾರಿ ವಿವಿಯಿಂದ ಪಿ.ಎಚ್.ಡಿ ಪದವಿ ಪ್ರಧಾನ

ಗುಡೇಕೋಟೆ: ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಮನಾಯ್ಕ ಡಿ. ಸಿದ್ದಪಡಿಸಿದ್ದ ,”ಆನ್ ಎಕಾನಾಮಿಕ್ಸ್ ಅನಾಲಿಸಿಸ್ ಆನ್ ಪುಡ್ ಸೆಕ್ಯೂರಿಟಿ ಇನ್ ಕರ್ನಾಟಕ’ ಎಂಬ ವಿಷಯ ಮಹಾ ಪ್ರಬಂಧಕ್ಕೆ ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಪಿಎಚ್. ಡಿ ಪದವಿಯನ್ನು ಪ್ರಧಾನ ಮಾಡಿ ಗೌರವಿಸಿದೆ ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಡಾ.ಶಶಿಧರ ಪಿ ಎಸ್. ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ ರಾಮನಾಯ್ಕ ಡಿ. ಪ್ರಸ್ತುತ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಶ್ರೀಕಂಠಾಪುರತಾಂಡ ಗ್ರಾಮ ನಿವಾಸಿ ಬಡ ರೈತ ಕುಟುಂಬದ ಶ್ರೀಮತಿ ಜಯಬಾಯಿ ಡಾಕ್ಯಾನಾಯ್ಕ.ಕೆ.ಎಸ್.ದಂಪತಿಯ ಏಕೈಕ ಪುತ್ರ ರಾಮನಾಯ್ಕ ಡಿ. ಡಾಕ್ಟರೇಟ್ ಪದವಿ ಪಡೆದ ವಿದ್ಯಾರ್ಥಿಗೆ ಶಿಕ್ಷಕರು. ಗ್ರಾಮಸ್ಥರು ಯುವಕರು ಅಭಿನಂದಿಸಿದ್ದಾರೆ…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend