ಗುಡೇಕೋಟೆ ಮಳೆಯಲ್ಲೇ ಆಸ್ಪತ್ರೆ ಮತ್ತು ಕಾಲೇಜ್ ಗಳಿಗೆ ಭೇಟಿನೀಡಿದ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್…!!!

Listen to this article

ಗುಡೇಕೋಟೆ ಮಳೆಯಲ್ಲೇ ಆಸ್ಪತ್ರೆ ಕಾಲೇಜಿಗೆ ಡಿಸಿ ಅನಿರುದ್ಧ ಶ್ರವಣ್ ಬೇಟಿ

ಗುಡೇಕೋಟೆಜು.7:-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆಗೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ರವರು ಸರ್ಕಾರದ ಕಾರ್ಯಕ್ರಮದಂತೆ ಮಂಗಳವಾರ ಸಂಜೆ ಮಳೆಯಲ್ಲೆ ಛತ್ರಿ ಹಿಡಿದು ಆಕಸ್ಮಿಕವಾಗಿ ದಿಡೀರ್ ಸರ್ಕಾರಿ ಆಸ್ಪತ್ರೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಅಲ್ಲಿನ ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳನ್ನು ಅಲಿಸಿದರು.

ಕರ್ನಾಟಕ ಪಬ್ಲಿಕ್ ಶಾಲೆ ಸಿಬ್ಬಂದಿಯವರು ಶಾಲಾ ವೇಳೆಗಿಂತ ಮುಂಚಿತವಾಗಿ ಶಾಲೆಯನ್ನು ಮುಚ್ಚಿರುವ ಬಗ್ಗೆ ಗಮನಿಸಿದ ಜಿಲ್ಲಾಧಿಕಾರಿ ಗುಡೆಕೋಟೆ ಶಾಲೆಗೆ ಸಂಜೆ ನಾಲ್ಕು ಗಂಟೆಗೆ ಆಕಸ್ಮಿಕವಾಗಿ ಭೇಟಿ ನೀಡಿದಾಗ ಶಾಲೆಯಲ್ಲಿ ಯಾವ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಸಹ ಇರಲಿಲ್ಲ ಶಾಲೆಯನ್ನು ಮುಚ್ಚಲಾಗಿತ್ತು. ಹಾಗೂ ಅಲ್ಲೇ ಹೊರಗಡೆ ನಿಂತಿರುವ ವಿದ್ಯಾರ್ಥಿಗಳನ್ನು ಕಲಿಕೆ ಬಗ್ಗೆ ವಿಚಾರಿಸಿದರು. ಮಕ್ಕಳ ಕಲಿಕಾ ಗುಣಮಟ್ಟ ಹಿಂದುಳಿದಿರುವುದನ್ನು ಗಂಭೀರವಾಗಿ ಗುರುತಿಸಿ ಕೆಪಿಎಸ್ ಶಾಲೆ ಎಲ್ಲಾ ಶಿಕ್ಷಕರ ಮೇಲಿನ ನೂನ್ಯತೆಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದ್ದಾರೆ.

ನಿನ್ನೆ ಸಂಜೆ ಗುಡೇಕೋಟೆಗೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಸರ್ಕಾರಿ ಆಸ್ಪತ್ರೆ ಭೇಟಿ ನೀಡಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾಗುತ್ತಿರುವ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ಆರೋಗ್ಯ ಇಲಾಖೆಯ ವೈದ್ಯರ ಜೊತೆ ಆಸ್ಪತ್ರೆಯಲ್ಲಿ ಔಷಧಿ.ಕೆಲ ಕಟ್ಟಡದ ಸೋಲುವಿಕೆಯು ಬಗ್ಗೆ ವೈದ್ಯರ ಕೊರತೆ ಬಗ್ಗೆ ಮಾಹಿತಿ ಪಡೆದು ನಂತರ ಹೆರಿಗೆಯಾದ ಮಹಿಳೆಯೋರ್ವಳ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಹಶೀಲ್ದಾರ್ ಟಿ.ಜಗದೀಶ್.ಗುಡೇಕೋಟೆ ವೈದ್ಯಾಧಿಕಾರಿ ಶ್ರೀಧರಬಾಬು.ಗುಡೇಕೋಟೆ ಕಂದಾಯ ನಿರೀಕ್ಷಕ ಚೌಡಪ್ಪ.ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend