ಕೊಪ್ಪಳ : ಓರ್ವ ಯುವಕನ ಶವ ಪತ್ತೆ ಕೊಪ್ಪಳ ಜಿಲ್ಲಾ ಮುನಿರಾಬಾದ್ ಏರಿಯಾ ಪಕ್ಕದಲ್ಲಿ ಬರುವ ತುಂಗಭದ್ರಾ ಎಡದಂಡೆ ಕಾಲುವೆ ಬ್ರಿಡ್ಜ್ ಹತ್ತಿರ ಒಬ್ಬ ಯುವಕನನ್ನು ಕ್ರೂರವಾಗಿ ಹತ್ಯೆಗೆಯಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿ ವರ್ಗದವರು ತನಿಖೆ ಶುರು ಮಾಡಿದ್ದಾರೆ ಇನ್ನು ಯಾವುದೇ ಯುವಕನ ಮಾಹಿತಿ ದೊರತಿಲ್ಲ. ಈ ಕೊಲೆಯು ನಿನ್ನೆ ರಾತ್ರಿ ಅಥವಾ ಇಂದು ಬೆಳಗಿನ ಜಾವ ಸಂಭವಿಸಿರಬಹುದೆಂದು ಪೊಲೀಸರ ಅಭಿಪ್ರಾಯ. ದುಷ್ಕರ್ಮಿಗಳು ಯುವಕನನ್ನು ಬರ್ಬರವಾಗಿ ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿ ಆ ಶವವನ್ನು ತುಂಬಿ ತುಂಗಾಭದ್ರ ಎಡದಂಡೆ ಕಾಲುವೆ ಮುನಿರಾಬಾದ್ ಡ್ಯಾಂ ಪಕ್ಕದಲ್ಲಿ ಬರುವ ಪಂಜಾಬಿ ಡಾಬದ ಹತ್ತಿರ ಎಸೆದು ಅಲ್ಲಿಂದ ದುಷ್ಕರ್ಮಿಗಳು ಪರಾರಿಯಾಗಿರಬಹುದೆಂಬುವ ಶಂಕೆ ವ್ಯಕ್ತವಾಗುತ್ತಿದೆ…..
ವರದಿ. ಉಮೇಶ್,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030