ಗೆದ್ದಲಕಟ್ಟೆ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಿ.ಐ.ಟಿ.ಯು ಗ್ರಾಮ ಘಟಕ ಉದ್ಘಾಟನೆ
ಕೂಡ್ಲಿಗಿ ತಾಲೂಕಿನ ಗೆದ್ದಲಕಟ್ಟೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸಿಐಟಿಯು ಹಾಗೂ ಸಿಡಬ್ಲ್ಯೂಎಫ್ಐ ಗ್ರಾಮ ಘಟಕವನ್ನು ಕೂಡ್ಲಿಗಿ ಸಿ.ಐ.ಟಿ.ಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಹಾಗೂ ಕಟ್ಟಡ ಕಾರ್ಮಿಕರ ಮುಖಂಡರಾದ ಸಿ ವಿರೂಪಾಕ್ಷಪ್ಪ ವಕೀಲರು ಇವರ ಸಮ್ಮುಖದಲ್ಲಿ ಗ್ರಾಮ ಘಟಕ ನಾಮಫಲಕ ಉದ್ಘಾಟಿಸಿದರು. ತದನಂತರ ಸಂಘಟನೆಯ ಕುರಿತಾಗಿ ಸಂಘದ ನಿಯಮಗಳನ್ನು ಹಾಗೂ ಕಟ್ಟಡ ಕಾರ್ಮಿಕರ ಸರ್ಕಾರದ ಸವಲತ್ತುಗಳನ್ನು ಎಲ್ಲಾ ಕಾರ್ಮಿಕರಿಗೆ ತಿಳಿಸಿ ಹೇಳಿದರು. ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಜಾರಿತಂದಿದೆ. ಅವುಗಳನ್ನು ಸಮರ್ಪಕವಾಗಿ ಹೊಂದಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ತಾಲೂಕ್ ಅಧ್ಯಕ್ಷರಾದ ಎಂ.ಬಿ ಅಯ್ಯನಳ್ಳಿ ಕರಿಯಪ್ಪ, ಮರಳು ಸಿದ್ದಪ್ಪಾಚಾರಿ, ಅಯ್ಯನಳ್ಳಿ ತಿಪ್ಪೇಸ್ವಾಮಿ ಬಿ. ಸುರೇಶ್, ಹುಲೆಪ್ಪ, ಕೊಟ್ರೇಶ್, ಚಿರತಗೊಂಡು ಬಸವರಾಜ, ಓಂಕಾರಿ, ಬೋರಣ್ಣ, ಬಾಲಚಂದ್ರ ಸಿದ್ದಪ್ಪ, ಬಸವರಾಜ್ ಸೇರಿದಂತೆ ಗೆದ್ದಲಕಟ್ಟೆ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು…
ವರದಿ. ವಿರೇಶ್ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030