ಕೂಡ್ಲಿಗಿ ಮದಕರಿ ವೃತ್ತದಲ್ಲಿ ಎಐಸಿಸಿಯ ನೂತನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ರವರಿಗೆ ಅವರ ಫೋಟೋವನ್ನು ಹಿಡಿದು ಸಿಹಿ ಹಂಚುವುದರ ಮುಖಾಂತರ ಸ್ವಾಗತ ಕೋರಿದರು…
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದಲ್ಲಿ ಎಐಸಿಸಿಯ ನೂತನ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ರವರು ಆಯ್ಕೆಯಾಗಿದ್ದು ಆಯ್ಕೆಯಾದವರಿಗೆ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಖರ್ಗೆ ರವರ ಫೋಟೋವನ್ನು ಹಿಡಿದು ಪಟಾಕಿ ಹಚ್ಚುವುದರ ಮುಖಾಂತರ ಹಾಗೂ ಸಿಹಿ ಹಂಚಿ ಸಡಗರದಿಂದ ಶುಭಕೋರಿದರು ಈ ಸಂದರ್ಭದಲ್ಲಿ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗುರು ಸಿದ್ದನ ಗೌಡ್ರು ಆಯ್ಕೆಯಾದ ಮಲ್ಲಿಕಾರ್ಜುನ್ ಖರ್ಗೆ ರವರನ್ನು ಉದ್ದೇಶಿಸಿ ನಮ್ಮ ಕರ್ನಾಟಕದಿಂದ ಎಐಸಿಸಿಯ ಅಧ್ಯಕ್ಷರಾಗಿರುವ ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ವಿಜಯನಗರ ಜಿಲ್ಲಾಧ್ಯಕ್ಷರಾದ ಶ್ರೀ ನಲ್ಲ ಮತ್ತು ದುರ್ಗಾ ದಾಸ್ ನಾಯಕ್ ಹಾಗೂ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಯುವಕರು ಅಭಿಮಾನಿಗಳು ಇದ್ದರು..
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030