ಭಾರತ ಐಕ್ಯತಾ ಯಾತ್ರ ಪೂರ್ವಭಾವಿ ಸಭೆ..
ವಿಜಯನಗರ ಜಿಲ್ಲೆ ಕೂಡ್ಲಿಗಿ ಪ್ರವಾಸ ಮಂದಿರದಲ್ಲಿ ಭಾರತ್ ಐಕ್ಯತಾ ಯಾತ್ರೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು ಈ ಸಭೆಯಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ ಐತಿಹಾಸಿಕ ಭಾರತ ಜೋಡೊ ಏಕತಾ ಯಾತ್ರೆ ಬೃಹತ್ ಬಹಿರಂಗ ಸಮಾವೇಶ ಬಳ್ಳಾರಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ನಾವು ಎಲ್ಲಾ ಕಾಂಗ್ರೆಸ್ ಲೀಡರ್ ಗಳ ಮತ್ತು ಪಕ್ಷದ ಮುಖಂಡರಾದ ನಮ್ಮ ಜೊತೆಗೆ ಸಾಮಾನ್ಯ ಜನರಲ್ಲಿ ಅತಿ ಹೆಚ್ಚಾಗಿ ಜನರನ್ನು ಕರೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಜೋಡ ಯಾತ್ರೆಯನ್ನು ಒಂದೇ ಕಳಿಸೋಣ ಎಂದು ಈ ಸಭೆಯಲ್ಲಿ ಚರ್ಚಿಸಿದರು ಈ ಸಂದರ್ಭದಲ್ಲಿ ಕೆಪಿಸಿಸಿಯ ಉಸ್ತುವಾರಿಗಳಾದ ಶ್ರೀಮತಿ ಎಂಪಿ ವೀಣಾ ಮಹಂತೇಶ್ ಹಾಗೂ ರಘು ಗುಜ್ಜಲ್ ನಾಗಮಣಿ ಜಿಂಕಲ್ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರು ಸಿದ್ದನಗೌಡ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುಮಾರ ಗೌಡ ರವರು ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಅವರು ಒಂದು ದೇಶಕ್ಕಾಗಿ ಇಂದು ನಮ್ಮ ಸಂವಿಧಾನ ಉಳಿವಿಗಾಗಿ 3500 ಕು ಹೆಚ್ಚು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಕಾಲ್ನಡಿಗೆಯ ಮುಖಾಂತರ ಜನರ ಸಮಸ್ಯೆಗಳನ್ನು ಚರ್ಚಿಸಿ ಮುಂದೆ ಹೋಗುತ್ತಿರುವ ಭಾರತ ಜೋಡೊ ಐಕ್ಯತ ಯಾತ್ರೆ ಹಮ್ಮಿಕೊಂಡಿದ್ದು ಈ ಯಾತ್ರೆಗೆ ನಾವು ಸಹ ಹೆಜ್ಜೆ ಹಾಕೋಣ ಬನ್ನಿ ಎಂದು ಈ ಸಭೆಯಲ್ಲಿ ಮಾತನಾಡಿದರು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಕುಂಬಳಗುಂಟೆ ಮನೋಜ್ ಕುಮಾರ್ ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷರಾದ ನಲ್ಲ ಮುತ್ತಿ ದುರ್ಗೇಶ್ ಜಿಲ್ಲಾ ಎಸ್ಟಿ ಘಟಕದ ಜಿಲ್ಲಾಧ್ಯಕ್ಷರಾದ ಕಾವಲಿ ಶಿವಪ್ಪ ಜುಮ್ಮೋಬನಹಳ್ಳಿ ಜಿ ಓಬಣ್ಣ ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರು ಯುವಕರು ಕಾರ್ಯಕರ್ತರು ಇದ್ದರು.
ವರದಿ,ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030