ಶಾಲೆಯ ಬೀಗ ಮುರಿದು ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಖದೀಮರು…!!!

Listen to this article

ಶಾಲೆಯ ಬೀಗ ಮುರಿದು ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಖದೀಮರು

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ರಾತ್ರಿ ಶಾಲೆಯ ಬೀಗಮುರಿದು ಪ್ರೊಜೆಕ್ಟರ್, ಊಟದ ಎಣ್ಣೆ, ಹಾಲಿನ ಪಾಕೆಟ್, ವಾಲಿಬಾಲ್ ಹಾಗೂ ನೆಟ್ ಮತ್ತು ಶೂಗಳನ್ನು
ಯಾರೋ ಕಳ್ಳರು ಕದ್ದೊಯ್ದಘಟನೆ ಜರುಗಿದೆ. ಇಂದು ಶನಿವಾರ ಬೆಳಿಗ್ಗೆ ಶಾಲೆಯ ಬೀಗ ತೆರೆದು ಸ್ವಚ್ಛಗೊಳಿಸಲು ಬಂದ ಡಿ ಗ್ರೂಪ್ ನೌಕರ ಶಾಲೆಯ ಬಾಗಿಲು ತೆಗೆದಿದ್ದನ್ನು ಕಂಡು ತಕ್ಷಣ ಶಾಲಾ ಮುಖ್ಯಗುರುಗಳಿಗೆ ಮಾಹಿತಿ ನೀಡಿದರೆ. ಮೊದಲು ಆಫೀಸ್ ರೂಮ್ ಬಾಗಿಲು ಮುರಿದು ಅಲ್ಲಿದ್ದ ಶಾಲಾ ಕೊಠಡಿಗಳ ಬೀಗ ತೆಗೆದುಕೊಂಡು ಕ್ರೀಡಾ ಕೊಠಡಿಗೆ ಹಾಗೂ ಆಹಾರ ಸಾಮಗ್ರಿಗಳಿರುವ ಕೊಠಡಿಗಳ ಬೀಗ ಮುರಿದು ಅಲ್ಲಿದ್ದ 48 ಸಾವಿರ ರೂ ಬೆಲೆಬಾಳುವ ಪ್ರೊಜೆಕ್ಟರ್, ಐದು ಸಾವಿರ ರೂ ನ 30ಲೀಟರ್ ಸನ್ ಫ್ಲವರ್ ಎಣ್ಣೆ, 25 ಕೆಜಿ ಹಾಲಿನ ಪ್ಯಾಕೆಟ್, 1900 ರೂ ಬೆಲೆಬಾಳುವ ಮೂರು ವಾಲಿಬಾಲ್, ಎಂಟು ಸಾವಿರ ರೂ ಬೆಲೆಗಳ 6 ಜೊತೆ ಶೂ ಗಳು, 1200 ರೂ ಬೆಲೆಯ ವಾಲಿಬಾಲ್‌ನಟ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಈ ಘಟನೆ ಕುರಿತು ಹೊಸಹಳ್ಳಿ ಪಿಎಸ್‌ಐ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಂಗಪ್ಪ ದೂರಿನ ಅನ್ವಯ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend