ಸರ್ಕಾರಿ ಬಸ್ಸನ್ನು ಪೂಜೆಮಾಡಿ ಸ್ವಾಗತಿಸಿದ ತಿಪ್ಪೇಹಳ್ಳಿಯ ಗ್ರಾಮಸ್ಥರು…!!!

Listen to this article

ಸರ್ಕಾರಿ ಬಸ್ಸನ್ನು ಪೂಜೆಮಾಡಿ ಸ್ವಾಗತಿಸಿದ ತಿಪ್ಪೇಹಳ್ಳಿಯ ಗ್ರಾಮಸ್ಥರು.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮವಾದ ತಿಪ್ಪೇಹಳ್ಳಿಯಲ್ಲಿ ಸರ್ಕಾರಿ ಬಸ್ಸಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ಗಳಾದ ತಿಪ್ಪೇಹಳ್ಳಿ ಕಾತ್ರಿಕೆನಹಟ್ಟಿ ಹೊಸೂರು ಗ್ರಾಮಗಳಿಗೆ ಬಸ್ಸಿನ ಸಂಪರ್ಕ ಇಲ್ಲದೆ ಶಾಲಾ ಮಕ್ಕಳು ಮತ್ತು ಪ್ರಯಾಣಿಕರು ಹತ್ತಾರು ಕಿಲೋಮೀಟರ್ ದೂರದವರೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಬೇಕಾಗಿತ್ತು ಇದನ್ನು ಕಂಡ ಮೂರು ಗ್ರಾಮಗಳ ಗ್ರಾಮಸ್ಥರು ಲಿಖಿತ ರೂಪದಲ್ಲಿ ಮನವಿಯನ್ನು ಮಾನ್ಯ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಮತ್ತು ಮಾನ್ಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರಿಗೆ ನೀಡಲಾಗಿತ್ತು ಮನವಿ ಪತ್ರ ನೀಡಿದ ಕೆಲವೇ ದಿನಗಳಲ್ಲಿ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ ಈ ಬಸ್ಸು ಕಾನಹೊಸಳ್ಳಿ ಯಿಂದ ಮೊಳಕಾಲ್ಮೂರು ಮಾರ್ಗವಾಗಿ ಹೋಗುತ್ತದೆ ಎಷ್ಟೋ ಶಾಲಾ ಮಕ್ಕಳಿಗೆ ವಿವಿಧ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಬಹಳ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಮಾನ್ಯ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ಮತ್ತು ಮಾನ್ಯ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಪೂಜಾರಹಳ್ಳಿ ಗ್ರಾಮ ಪಂಚಾಯತಿಯ ತಿಪ್ಪೇಹಳ್ಳಿ ಗ್ರಾಮದ ಸದಸ್ಯರಾದ ಶ್ರೀಮತಿ ಗೌರಮ್ಮ ಮಂಜುನಾಥ್ ಮತ್ತು ಊರಿನ ಗ್ರಾಮಸ್ಥರು ಬಸ್ಸ ನಿಲ್ಲಿಸಿ ಪೂಜೆ ಮಾಡಿ ಸಿಹಿ ಹಂಚಿದರು.

ವರದಿ ಡಿ. ಎಂ. ಈಶ್ವರಪ್ಪ ಸಿದ್ದಾಪುರ

 

 

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend