ಗುಡೇಕೋಟೆ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ
ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢಶಾಲೆ ವಿಭಾಗ) ಗುಡೇಕೋಟೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಖ್ಯಅತಿಥಿಗಳಾಗಿ ನೂತನವಾಗಿ ಗುಡೆಕೋಟೆ ಪೊಲೀಸ್ ಠಾಣೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಬಂದಿರುವ ಶ್ರೀ ಮಾಲಿಕ್ sab ಕಲಾರಿ ಮಾತನಾಡಿ ಬಾಲ್ಯ ವಿವಾಹ , ಫೋಕಸ್ ಕಾಯ್ದೆ, ಬಾಲಾಪರಾಧ. ಮಿಸ್ಸಿಂಗ್ ಆಕ್ಟ್, ಅಪರಾಧ ತಡೆ, ಇನ್ನೂ ಅನೇಕ ವಿಷಯಗಳ ಕಾನೂನು ಅರಿವು ಮತ್ತು ನೆರವು ವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ವಾಹಬ್ ಸರ್, ಮಕ್ಕಳ ವಿಶೇಷ ಘಟಗದ ಪೊಲೀಸ್ ಅಧಿಕಾರಿ ವೀಣಾ ಮೇಡಂ. ಶಿಕ್ಷಕರಾದ ಶ್ರೀಮತಿ ನಾಗರತ್ನಮ್ಮ, ವಿಮಲಮ್ಮ, ಚಂದ್ರಪ್ಪ, ಎಲ್ಲಾ ಶಿಕ್ಷಕ ವರ್ಗದವರು ಗುರು ಮಾತೆಯರು ಬಿಎಡ್ ಪ್ರಶಿಕ್ಷಣಾರ್ಥಿಗಳು, 8, 9 & 10 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಶ್ರೀ ಮಹಮ್ಮದ್ ರಫೀಕ್ ಸರ್ ಮಾಡಿದರು. ವಂದನಾರ್ಪಣೆಯನ್ನು ಶಿಕ್ಷಕರಾದ ಶ್ರೀ ಹಯಾತ್ ಭಾಷಾ ಸರ್ ಮಾಡಿದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030