ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು .
ಅದ್ದೂರಿಯಾಗಿ ಜರುಗಿದ ಬಸವೇಶ್ವರ ರಥೋತ್ಸವ
ಕೂಡ್ಲಿಗಿ ತಾಲ್ಲೂಕಿನ ಅಮ್ಮನಕೆರೆ ಗ್ರಾಮದ ಶ್ರೀ ಬಸವೇಶ್ವರ ರಥೋತ್ಸವ ಸಾಯಂಕಾಲ 5 ಗಂಟೆಗೆ ಜರುಗಿತು. ವಿವಿಧ ವಾದ್ಯ ಮೇಳಗಳಿಂದ ಭಕ್ತಾಧಿಗಳಿಂದ,ಹಾಗೂ ಸಾರ್ವಜನಿಕರಿಂದ ನಂದಿ ಕೋಲು ಕುಣಿತ ಮೂಲಕ,ಊರಿನ ಮುಖಂಡರಿಂದ ಪಲ್ಲಕ್ಕಿಯಲ್ಲಿ ಬಸವೇಶ್ವರ ಮೂರ್ತಿಯನ್ನು ತಂದು ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಗ್ರಾಮಸ್ಥರ ಮುಖಂಡರ ದೈವಸ್ಥಾರ.ಸವಾಲಿನಂತೆ ಸಾರ್ವಜನಿಕರ ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ. ಪಟದ ಹಾರಾಜು ಮಾಡಲಾಯಿತು.ದೈವ ಸ್ಥರ ಸವಾಲಿನಂತೆ ಗೆದ್ದಲಗಟ್ಟೆ ಚನ್ನಪ್ಪನವರು 35 ಸಾವಿರ ರೂಪಾಯಿಗಳಿಗೆ ಸ್ವಾಮಿಯ ಪಾಠವನ್ನ ಸ್ವೀಕರಿಸಿದರು. ನಂತರ ಸ್ವಾಮಿಯ ರಥೋತ್ಸವ ಸಾಯಂಕಾಲ 5:30 ಗಂಟೆಗೆ ವಿಜೃಂಭಣೆಯಿಂದ ಜರುಗಿತು ಈ ರಥೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಸಾರ್ವಜನಿಕರು. ಮುಖಂಡರುಭಕ್ತಾದಿಗಳು ಸೇರಿದ್ದರು….
ವರದಿ. ಡಿ. ಎಂ, ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030