ಗ್ಯಾರಂಟಿ ಯೋಜನೆಗಳ ಅಪಪ್ರಚಾರಕ್ಕೆ ಕಿವಿಕೊಡದ ನಮ್ಮ ಸರ್ಕಾರ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ಅನುದಾನ ಕೊಟ್ಟಿದೆ. ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ಕ್ಷೇತ್ರದ ನಾಗರಕಟ್ಟೆ ಹಾಗೂ ತೂಲಹಳ್ಳಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ತೂಲಹಳ್ಳಿ ಗ್ರಾಮದಲ್ಲಿ ಮಾನ್ಯಶಾಸಕರು ದಿ. 13-03-24. ರಂದು ಉದ್ಘಾಟಿಸಿ ಮಾತನಾಡಿದರು.
ತೂಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಭಿವೃದ್ಧಿಗಾಗಿ 3 ಕೋಟಿ ಅನುದಾನ ತಂದಿರುವೆ.
ಹಾಗೆಯೇ ಒಂದು ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಒದಗಿಸಿಕೊಟ್ಟಿರುವೆ ಎಂದರು.
ನಮ್ಮ ಕೂಡ್ಲಿಗಿ ತಾಲೂಕಿಗೆ ತಂದ 10 ವಸತಿ ನಿಲಯಗಳಲ್ಲಿ 3 ವಸತಿ ನಿಲಯಗಳನ್ನು ಕೊಟ್ಟೂರು ತಾಲುಕಿಗೆ ಒದಗಿಸಿಕೊಟ್ಟಿರುವೆ.
ಇಲ್ಲಿನ ಎರಡು ಗ್ರಾ. ಪಂ. ಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ತಂದಿರುವೆ.
2014-16 ರಿಂದ ನೆನೆಗುದಿಗೆ ಬಿದ್ದಿರುವ 50 ಕೋಟಿ ಅನುದಾನವನ್ನು ತಂದಿರುವೆ.
ನಮ್ಮ ಕೂಡ್ಲಿಗಿ ತಾಲೂಕಿನ ಪ್ರತಿ ಶಾಲೆಗೆ ತೆರಳಿ ಅಂಬ್ಯುಲೆನ್ಸ್ ಮೂಲಕ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಅವಕಾಶವನ್ನು ಒದಗಿಸಿರುವೆ.
ಕರ್ನಾಟಕದ ಇತಿಹಾಸದಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ನೂರು ಜನಕ್ಕೆ ಅಂಗವಿಕಲರಿಗೆ ತ್ರೀ ಚಕ್ರವಾಹನಗಳನ್ನು ತಂದಿರುವೆ.
ನಮ್ಮ ಕ್ಷೇತ್ರದಲ್ಲಿ 74 ಕೆರೆಗಳಿಗೆ ಮಾರ್ಚಿ ತಿಂಗಳಲ್ಲಿ ನೀರು ಬಿಡಲಾಗುತ್ತದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಗಣ್ಯಮಾನ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು….
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030